This page has not been fully proofread.

ಹನುಮಂತ ಸಲ್ಲಿಸಿದ ಸೇವೆಯನ್ನು ಕಂಡು
ಸುಪ್ರೀತರಾದರು ಶ್ರೀ ರಾಮದೇವರು
ತಮ್ಮ ಹಸ್ತವನವನ ಶಿರದ ಮೇಲಿರಿಸುತ್ತ
ಅನುಕಂಪ ದೃಷ್ಟಿಯನ್ನು ಅವನೆಡೆಗೆ ಬೀರುತ್ತ
 
ಹಾಲಸವಿಯಂದದ ನುಡಿಗಳನ್ನು ನುಡಿದು
 
ಬ್ರಹ್ಮಪದವಿಯನಿತ್ತು ಹರಸಿದರು ಅವನ
 
ಹನುಮಂತನಾ ತೆರದಿ ಬೇರೊಬ್ಬರಿಲ್ಲ
ರಾಮಚಂದ್ರನಿಗಷ್ಟು ಪ್ರಿಯರು ಮತ್ತಾರಿಲ್ಲ
ರಾಮರಾಜ್ಯದಿ ಸಿಗದ ವಸ್ತುವೇ ಇಲ್ಲ
ಆದರೂ ಹನುಮಗೆ ರಾಮಸೇವೆಯ ಎಲ್ಲ
ಮತ್ತಾವ ಭೋಗವೂ ಅವಗೆ ಬೇಕಿಲ್ಲ
ನಿಜವಾದ ವೈರಾಗ್ಯ ಇದುವೆ ಅಲ್ಲ?
 
ಹನುಮಂತ ಸ್ತುತಿಸಿದನು ಶ್ರೀರಾಮನನ್ನು
"ನಮಿಪ ಶ್ರೀರಾಮ ! ನಮಿಪ ಓ ನಾಥ!
ನಮನ, ನಮನವು ನಿನಗೆ ಜಾನಕಿ ಕಾತ!
ಎರಗುವೆನು ನಿನ್ನಯಾ ಚರಣಾರವಿಂದಕ್ಕೆ
ವಂದಿಸುವೆ ನಿನಗೆ ಬಾರಿಬಾರಿಗೂ ನಾನು
ಹೀಗೆಂದು ಹನುಮಂತ ಸ್ತುತಿಸಿದನು ಸಂತಸದಿ
 
ಭೂಲೋಕವನ್ನು ಬಿಟ್ಟು ವೈಕುಂತದೆಡೆಗೆ
ಮರಳಿದಾ ಭಗವಂತ ಶ್ರೀ ರಾಮಚಂದ್ರ
ಅನುಗಾಲ ಪೂಜಿಸಲು ಅನುಕೂಲವಾಗಲು
 
ತನ್ನೊಂದು ರೂಪವನೇ ಹನುಮನ ಬಳಿ ಇಟ್ಟ
ವಾನರಾಗ್ರೇಸರ ಹನುಮಂತನಲ್ಲಿ
ಶ್ರೀರಾಮನಭಿಮಾನ ಎಷ್ಟೊಂದು ಬಣ್ಣಿಪುದು ?
 
ಮೊದಲನೆಯ ಸರ್ಗ /9
 
ܐܐ
 
24
 
25
 
26