This page has been fully proofread once and needs a second look.

ಈ ರೀತಿ ಯುಕ್ತಿಯನ್ನು ಮುಂದಿರಿಸಿದಲ್ಲಿ

ಭಗವಂತನಜ್ಞಾನಿ, ಭ್ರಾಂತಿರಹಿತನು ಎಂದಾಗುವುದು

ಜ್ಞಾನವಿಲ್ಲದ ಆತ ಭ್ರಾಂತಿ ಶೂನ್ಯನು ಹೇಗೆ ?

ಸಂಸಾರಿ ಜೀವನೊಲು ಇದು ಸಾಧ್ಯವೆ?
 
॥ ೧೭ ॥
 
ಸರ್ವಜ್ಞದಜ್ಞತ್ವ ಎಲ್ಲಿಯದು ಎಂದು

ವೇದಗಳು ವಾದಿಸಿ ಎಂದೆಲ್ಲ ಬಲ್ಲೆವು

ಆ ವೇದಗಳೆ ಈಶ್ವರನು ಆನಂದ ಪೂರ್ಣ

ಇಂತೆಂದು ಬಣ್ಣಿಪುದ ನೀ ಕೇಳಿಲ್ಲವೇನು ?
 
॥ ೧೮ ॥
 
ಈಶ್ವರಗೆ ದುಃಖವನ್ನು ಪರಿಹರಿಸಲೆಂದು
 

ಸುಖವನೂ ಆತನಿಗೆ ನೀಡರವಿವೇಕಿಗಳು
 

ಆತನಿಗೆ ದುಃಖಃತ್ವ ಇಲ್ಲವೆಂದಾದಲ್ಲಿ

ಚೇತನತ್ವವು ಅವಗೆ ಎಲ್ಲಿಂದ ಬಹುದು ?
 
.
॥ ೧೯ ॥
 
ಚೈತ್ರನಲ್ಲಿ ಇರುತಿಹುದು ದುಃಖ ಸಮವಾಯ

ಜ್ಞಾನ, ಇಚ್ಛೆಗಳೆರಡು ಸಮವಾಯ ಅಂಗಗಳು

ಈಶ್ವರನು ಹೊಂದಿಹನು ಈ ಎರಡು ಅಂಗಗಳ
 

ಎರಡು ಸಮವಾಯಗಳ ಭಿನ್ನತೆಯು ಸರಿಯೆ ?
 
॥ ೨೦ ॥
 
ಉಪಾಧಿ ಭೇದವನು ಒಪ್ಪುವೆಯ ನೀನು ?

ಈ ಭೇದ ಸತ್ಯವೋ ಮಿಥ್ಯವೋ ಹೇಳು

ಇದರಿಂದ <error>ಈ ಶನಿಗೆ </error><fix>ಈಶನಿಗೆ</fix>ದೋಷ ಉಂಟಾಗುವುದು

ಮಾಯಿಗಳ ಪಕ್ಷವನು ನೀ ತಿಳಿಯಲಾರೆ
 
॥ ೨೧ ॥
 
ಈಶ್ವರನ ಗುಣಗಳಿಗೆ ಭೇದವಿಹುದೆನ್ನುವರು

ಸಮವಾಯಕುಂಟೆ ? ಔಪಾಧಿಕ ಭೇದ ?

ಅವರ ಈ ಯುಕ್ತಿಯದು ಶಾಸ್ತ್ರ ಸಮ್ಮತವಲ್ಲ

ಪರಮಾತ್ಮನೆಂದೆಂದೂ ಗುಣ ಪೂರ್ಣನಾಗಿಹನು
 
252 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
17
 
18
 
19
 
20
 
21
 
22
 
॥ ೨೨ ॥