This page has been fully proofread once and needs a second look.

ಗಂಧಮಾದನ ಗಿರಿಯು ಮೂಲಿಕೆಗಳಾಗರವು

ಅರ್ಧಶತ ಸಾವಿರ ಯೋಜನದ ದೂರದಿಂ

ಎತ್ತಿತಂದನು ಹನುಮ ಸಂಜೀವ ಗಿರಿಯನ್ನು

ಶ್ರೀರಾಮ ಚಂದ್ರನ ಪೂಜೆಗೋಸುಗ ಆತ

ತನ್ನೆರಡು ಕೈಯಲ್ಲಿ ಹೂವನ್ನು ತರುವ

ಅದಕ್ಕಿಂತ ಸುಲಭ ಗಿರಿಯನ್ನು ಹೊರುವುದು
 
॥ ೧೯ ॥
 
ಲಂಕೆಯಾ ಕಾಳಗದ ಶ್ರೀರಾಮ ದೇವರು

ಸಂಹರಿಸಿ ರಾವಣ ಕುಂಭಕರ್ಣಾದಿಗಳ

ಬೆಂಕಿಯಲ್ಲಿ ಸ್ಪುಟಗೊಂಡ ಕನಕಹಾರದ ತೆರದಿ

ಪರಿಶುದ್ಧ ಮಾತೆ ಸೀತೆಯಾ ಜೊತೆಗೆ

ಮರಳಿದರು ಮತ್ತೆ ಅಯೋಧ್ಯೆಯೆಡೆಗೆ
 

ಹಿಂಬಾಲಿಸಿದನವರ ಹನುಮಂತ ದೇವ
 
॥ ೨೦ ॥
 
ಶ್ರೀರಾಮದೇವರದು ನಸುನಗೆಯ ಮೊಗವಹುದು

ನೀಳ ತೋಳುಗಳೆರಡೂ ದಷ್ಟಪುಷ್ಪ

ಕಮಲದಂತಿಹವವರ ಎರಡು ಕಣ್ಣುಗಳು

ನಡಿಗೆಯ ಗಾಂಭೀರ್ಯ ಗಜರಾಜನಂತಿಹುದು

ಜಗಕೆ ಮಂಗಳವೀವ ಈ ದಿವ್ಯ ಕಾಯವನು

ಎವೆಯಿಕ್ಕದೇ ನೋಡಿ ಸೇವಿಸಿದ ಹನುಮ !
 
॥ ೨೧ ॥
 
ರಾಜ್ಯಾಭಿಷೇಕವು ಶ್ರೀರಾಮಗಾಯ್ತು

ಮನಸೆಳೆವ ರತ್ನದ ಹಾರವೊಂದನು ತೆಗೆದು

ವೈದೇಹಿಗಿತ್ತರು ಶ್ರೀರಾಮದೇವರು

"ನಮ್ಮ ಮನ ಗೆದ್ದವಗೆ ನೀಡು ಇದನು"

ಎಂದು ಬೆಸಗೈದರು ಶ್ರೀರಾಮದೇವರು

ಒಡನೆ ಇತ್ತಳು ಸೀತೆ ಹನುಮಗದನು
 
8/ ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
19
 
20
 
21
 
22
 
॥ ೨೨ ॥