This page has been fully proofread once and needs a second look.

ಪ್ರವಚನವ ಪ್ರಾರಂಭಿಸಿದರವರು ಆಗ

ಉಪನಿಷದ್ಭಾಷ್ಯವನು ಅತಿ ಮಂದ್ರಸ್ಥಾಯಿಯಲಿ

ಶಿಷ್ಯರೆಲ್ಲರೂ ಗ್ರಹಿಸಿ ಅರ್ಥೈಸಿಕೊಳ್ಳುವಂತೆ

ಸುಸ್ಪಷ್ಟ ಪಠನವನು ಸುಲಭದಲ್ಲಿ ಮಾಡಿದರು

ಶ್ರವಣೇಂದ್ರಿಯಗಳಿಗೆಲ್ಲ ಅಮೃತ ಪ್ರಾಯವದು

ಅಮೃತಮಯ ಮೋಕ್ಷಕ್ಕೆ ಸಾಧನವು ಅಹುದು
 
॥ ೨೪ ॥
 
ಆನಂದ ತೀರ್ಥರು ಆಲಸ್ಯರಹಿತರು

ಪ್ರಶ್ನೆಗಳಿಗೆಲ್ಲದಕೂ ನಗುಮೊಗದ ಉತ್ತರ!

ಸೂರ್ಯಸುತ ಕರ್ಣನು ಧನವ ನೀಡಿದ ಹಾಗೆ

ಸುಜನರಿಗೆ ಉತ್ತರವ ದಯಪಾಲಿಸಿದರು

ಕದನದಲಿ ಪಾರ್ಥನು ಬಿಟ್ಟ ಬಾಣದ ತೆರದಿ

ದುಷ್ಟರಿಗೆ ಖಂಡನೆಯ ಮಾತುಗಳ ನೀಡಿದರು
 
॥ ೨೫ ॥
 
ಹತ್ತಾರು ಸಾವಿರದ ಕಿರಣಗಳ ಆ ಸೂರ್ಯ -

ಮೆಲಮೆಲನೆ ಪಡುವಣದ ಕಡೆಗೆ ಸರಿದಿರಲು
 

ಪ್ರವಚನವ ಪೂರೈಸಿ ಕೊಳದ ಬಳಿ ನಡೆದಿರಲು

ಆನಂದ ತೀರ್ಥರ ಸಂಬಂಧ ಹೊಂದಲು

ಗಂಗಾದಿ ತೀರ್ಥಾಭಿಮಾನಿಗಳು ಎಲ್ಲರೂ

ತ್ವರೆಯಿಂದ ಕೊಳದಲ್ಲಿ ಸನ್ನಿಹಿತರಾದರು
 
॥ ೨೬ ॥
 
ಅತ್ಯಂತ ಪರಿಶುದ್ಧ ಆ ಜಲಸಮೂಹ!

ಅಂತರಂಗದ ತುಂಬ ಸ್ನೇಹವನ್ನು ತುಂಬಿಟ್ಟು

ಶ್ರೇಷ್ಠತಮ ಮುನಿಗಣವ ಹೋಲುವಂತಿತ್ತು

ಮೊದಲಿನಲಿ ಮಧ್ವರಾ ಪ್ರತಿಬಿಂಬ ಸ್ವೀಕರಿಸಿ

ಸುಜನರಿಗೆ ಪ್ರಿಯವಾದ ಮಧ್ವರಾಕೃತಿಯನ್ನು

ಮಜ್ಜನದ ಕಾಲದಲಿ ಸ್ಪುಫುಟವಾಗಿ ಪಡೆಯಿತು
 
ಹದಿನಾಲ್ಕನೆಯ ಸರ್ಗ / 239
 
24
 
25
 
26
 
27
 
॥ ೨೭ ॥