This page has been fully proofread once and needs a second look.

ಮನವ ನಿಗ್ರಹಿಸಿದ ಸನ್ಯಾಸಿಯೊಬ್ಬರು

ದೀಪಗಳು ಬೆಳಗುತಿಹ ಅರುಣಕಾಲದೊಳೆದ್ದು

ಮಧ್ವಮುನಿಗಳ ಬಳಿಯ ಶ್ರೇಷ್ಠತಮ ಶಂಖದಲಿ
ಅರ್ತ್

ಅರ್ಘ್
ಯ ಪಾದ್ಯಾದಿಗಳ ದೇವರಿಗೆ ಅರ್ಪಿಸಿ

ಶಾಲಗ್ರಾಮಗಳಿಂದ ನಿಬಿಡವಾಗಿಹ ಹರಿಯ

ಪ್ರತಿಮೆಗಳ ಮಧ್ಯದಿಂ ಪುಷ್ಪಗಳ ತೆರೆದು ಆದರದಿ ಇರಿಸಿದರು
 
॥ ೧೨ ॥
 
ಪ್ರತಿನಿತ್ಯ ಅಮೃತವೇ ದೇವತೆಗಳಿಗಶನವು

ಇಂಥ ದೇವತೆಗಳು ಮಧ್ವರನು ಸೇವಿಪರು

ನಿರ್ಮಾಲ್ಯ ಪುಷ್ಪದಲಿ ಸುರಿದ ಅಮೃತವನ್ನು
ಧೃ

ಘೃ
ತವೆಂದೇ ತಿಳಿದರು ಆ ಮಧ್ವಶಿಷ್ಯರು

ಮಧ್ವಮಾಹಾತ್ಮ್ಯವನು ಬಲ್ಲ ಸ್ತೋವೋತ್ತಮರಿಂದ

ಭ್ರಮೆ ನಿವಾರಿಸಿಕೊಂಡು ಅಮೃತ ವನರಿತರು
 
॥ ೧೩ ॥
 
ಗಾಯತ್ರಿ ಮುಂತಾದ ಮಂತ್ರದಿಂದಲಿ ಕೂಡಿ

ಮೂರು ಉದಯಗಳನ್ನು ಹೊಂದಿಹನು ಸೂರ್ಯ

ಮೂರು ವಿಧ ಶಕ್ತಿಗಳ ಹೊಂದಿರುವ ಆತ
 

ಮಂಡಲದ ಮಧ್ಯದಲಿ ವಿಷ್ಣುವನು ಧರಿಸಿಹನು

ಉಷ್ಣಕಿರಣ ಎಂಬ ಹೆಸರನ್ನು ಹೊತ್ತಿರುವ

ಸೂರ್ಯ ಸಾಮ್ರಾಟನು ಆಗ ಉದಿಸಿದನು
 
॥ ೧೪ ॥
 
ಕತ್ತಲೆಯು ಅತಿ ತೀಕ್ಷ್, ಅತ್ಯಂತ ಸ್ಥಿರವಹುದು

ಪ್ರಾಣಿಗಳ ಮಾರ್ಗಕ್ಕೆ ಅಡ್ಡಿಯನ್ನು ಮಾಡುವುದು

ಭುವನ ಮಂದಿರದಲ್ಲಿ ವ್ಯಾಪ್ತವಾಗಿಹುದು ಅದು

ಅಂಜನವ ಹೋಲುವ ಕತ್ತಲೆಂಬುವ ಆನೆ

ಸಿಂಹಗಳ ನಖದಿಂದ ತತ್ತರಿಸಿ ಬಿದ್ದಂತೆ

ಸೂರ್ಯ ಕಿರಣಗಳಿಂದ ಕತ್ತಲೆಯು ಬಿತ್ತು.
 
236 / ಶ್ರೀ ಸುಮಧ್ವವಿಜಯ, ಕನ್ನಡ ಕಾವ್ಯ
 
12
 
13
 
14
 
15
 
॥ ೧೫ ॥