This page has been fully proofread once and needs a second look.

ಮಧ್ವಮುನಿಗಳ ಹಲವು ಯತಿಶ್ರೇಷ್ಠ ಶಿಷ್ಯರು

ಶಾಸ್ತ್ರದಲ್ಲಿ ಸೂಚಿಸಿಹ ದಂತಕಾಷ್ಠಗಳಿಂದ
 

ದಂತಗಳಿಗೀಯುವರು ಧವಳ ಕಾಂತಿಯನ್ನು
 

ಕಲ್ಯಾಣಿಯಲಿ ಮಿಂದು ಶುದ್ಧಿಗೊಳ್ಳುವರು

ಈ ತೆರದ ಶ್ರೇಷ್ಠತಮ ಕರ್ಮದಾಚರಣೆಯಲ್ಲಿ
ಲಿ
ಗುರುಗಳಲಿ ನಿಷ್ಠೆಯನು ಸ್ಪುಫುಟಗೊಳಿಸುತ್ತಿದ್ದರು
 
॥ ೮ ॥
 
ರಾತ್ರಿಯಲ್ಲಿ ಗುರುಗಳು ಪವಡಿಸಿದ ಬಳಿಕವೇ

ಶಿಷ್ಯರೆಲ್ಲರೂ ತಮ್ಮ ಶಯ್ಕೆಯೆಗಳ ಸೇರುವರು

ಬೆಳಗಿನಲಿ ಗುರುಗಳಿಗೆ ಮುಂಚಿತವೇ ಎಚ್ಚೆತ್ತು

ಮರುದಿನದ ರಾತ್ರಿಯ ಮಧ್ಯದ ವರೆಗೂ

ಸಂತೋಷ ಚಿತ್ತದಲ್ಲಿ ಗುರುಸೇವೆ ಮಾಡುವರು

ಇಲ್ಲದಿರೆ ಶಿಷ್ಯರಿಗೆ ಸದ್ತಿಯು ಲಭಿಸುವುದೆ ?
 
॥ ೯ ॥
 
ಹಿಂದಿನ ರಾತ್ರಿಯಲ್ಲಿ ಶ್ರವಣ ಮನನಗಳಿಂದ

ಬಹುವಾಗಿ ದಣಿದಿದ್ದ ಹೊಸ ಶಿಷ್ಯನೊಬ್ಬ

ರಾತ್ರಿಯಲ್ಲಿ ಸರಿಯಾಗಿ ನಿದ್ರಿಸದೆ ಆತ
 

ಬೆಳಗಿನ ಮಂಪರಲಿ ಪರಮ ಪರವಶನಾದ

ತನಗಿಂತಲೂ ಮೊದಲು ಗುರುವು ಹೊರಟುದ ಕಂಡು

ಆ ಶಿಷ್ಯ ಬಹುವಾಗಿ ಪರಿತಾಪ ಪಟ್ಟ
 
॥ ೧೦ ॥
 
"ನಮಗಿಂತಲೂ ಮೊದಲು ನೀವೇಳಲಿಲ್ಲ

ನಿಮ್ಮ ಪಾಲಿನ ಕೆಲಸ ನಿರ್ವಹಿಸಲಿಲ್ಲ"

ಎಂದೆಲ್ಲ ಗುರುಗಳು ಆರೋಪಿಸುವರೆಂಬ

ಶಂಕೆಯನು ತಾಳುತ್ತ ಹಲವಾರು ಶಿಷ್ಯರು

ನಮ್ರಭಾವದಿ ನಿಂತು, ದಾರಿಗಡ್ಡವ ಬಿಟ್ಟು

ನೀರೊಳಗೆ ಇಳಿಯದೆಯೆ ಪ್ರವಚನವ ಕೇಳಿದರು
 
ಹದಿನಾಲ್ಕನೆಯ ಸರ್ಗ / 235
 
8
 
10
 
11
 
॥ ೧೧ ॥