This page has been fully proofread once and needs a second look.

"ಪರಿಶುದ್ಧ ಮನಸಿನ ಜಯಸಿಂಹ ನೃಪ ಕೇಳು

ಆನಂದ ತೀರ್ಥರ ಶ್ರೀಪಾದ ರೇಣು

ಪರಮಪಾವನ ಪೂಜ್ಯ, ಸುಜನ ಶಿರೋಧಾರ್ಯ

ಇದ ಭಜಿಪ ಸುಜನರಿಗೆ ಇಂದ್ರಪದ ಲಭಿಸುವುದು

ಅದೃಷ್ಟ ಹೀನರಿಗೆ ದುರ್ಲಭವು ಇದಹುದು

ಈ ಪಾದಧೂಳಿಯು ಕರುಣಿಸಲಿ ಮಂಗಳವ
 
" ॥ ೪ ॥
 
"ಪರಿಚಯವೇ ಇಲ್ಲದ ಕಾನನದಿ ಕೂಡ
ಶೃಂ

ಭೃಂ
ಗರಾಜನು ಪುಷ್ಪ ಮಕರಂದ ಅರಿತಂತೆ

ಪಂಡಿತೋತ್ತಮರಾದ ಆ ತ್ರಿವಿಕ್ರಮರು

ಅಪರಿಚಿತ ಮಧ್ವರ ಅಪರಿಚಿತ ಸದ್ಗುಣವ

ಒಮ್ಮೆಗೇ ಅರಿತರು ಸ್ವಜ್ಞಾನ ಬಲದಿಂದ

ಇದರಲ್ಲಿ ಅಚ್ಚರಿಯು ಲವಲೇಶವೂ ಇಲ್ಲ
 
॥ ೫ ॥
 
ಶ್ರೀ ಮಧ್ವಾಚಾರ್ಯರ ಆಹ್ನಿಕ ವರ್ಣನೆ

 
ಖಳಕುಲಕೆ ದ್ವೇಷದ ದೋಷವನು ಹೆಚ್ಚಿಸುತ

ಮಧ್ಯಮರಿಗೆಲ್ಲರಿಗೂ ಕೌತುಕವ ಹುಟ್ಟಿಸುತ

ಮುಕುತಿಪದ ಯೋಗ್ಯರಿಗೆ ಐಸಿರಿಯ ನೀಡುತ್ತ

ನಾಲ್ಕು ತಿಂಗಳ ವ್ರತವ ನಿಷ್ಠೆಯಲಿ ಮಾಡುತ್ತ

ಶ್ರೀ ಪೂರ್ಣಪ್ರಜ್ಞರು ವಿಷ್ಣು ಮಂಗಲದಲ್ಲಿ

ಹಲವು ರಾತ್ರಿಗಳನ್ನು ಸಂಭ್ರಮದಿ ಕಳೆದರು
 
॥ ೬ ॥
 
ವಿಹಿತ ಕರ್ಮಗಳನ್ನು ಬಲ್ಲ ಜನರಲ್ಲಿ

ಮಧ್ವಮುನಿ ಉತ್ತಮರು, ಎಲ್ಲರೊಳು ಶ್ರೇಷ್ಠರು

ಬ್ರಾಹೀಹ್ಮೀ ಮುಹೂರ್ತದಲ್ಲಿ ನಿದ್ದೆಯಿಂದೇಳುತ

ಸ್ನಾನಾದಿ ಕಾರ್ಯಗಳ ವಿಹಿತದಲಿ ಮುಗಿಸಿ

ಅರುಣ ಯವನಿಕೆಯೊಳಗೆ ಯೋಗ್ಯ ಯೋಗಾಸನದಿ

ನಾರಾಯಣ ಎಂಬ ಬ್ರಹ್ಮನನು ಸ್ಮರಿಸಿದರು
 
234 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
6
 
7
 
॥ ೭ ॥