This page has been fully proofread once and needs a second look.

"ಇಂಥ ವಿಷಯದಿ ನಾವು ಆಗ್ರಹವ ಬಿಡಬೇಕು

ಅಂತಹ ಆಗ್ರಹವ ತ್ಯಜಿಸಿ ಪರಿಕಿಸಿದಾಗ

ಸೂತ್ರಗಳ ಅರ್ಥಕ್ಕೆ ಅನುಗುಣವು ಎನಿಸುವ

ಒಂದಾದರೂ ಭಾಷ್ಯ ನಮಗೆ ದೊರೆಯುವುದಿಲ್ಲ
 

ಶಂಕರಾಚಾರ್ಯ ಕೃತ ಭಾಷ್ಯವೊಂದನ್ನು ಮಾತ್ರ

ಪಠಣ ಮಾಡದೆ ಇರಲು ಸಾಧ್ಯವೆಮಗಿಲ್ಲ
 
॥ ೫೬ ॥
 
"ಅಲ್ಪಮತಿಗಳು ನಾವು, ಅತಿ ಅಪ್ರಬುದ್ಧರು

ಉಪನಿಷತ್ತಿನ ವಾಣಿ ಕೇಳಿಸದು ನಮಗೆ
"
ಎಂದೆನುತ ಪರಬ್ರಹ್ಮ ತತ್ವ ಮನಗಾಣದಿರೆ

ಮುಕ್ತಿಯನ್ನು ಕಾಂಬುವುದು ಎಂತು ಸಾಧ್ಯ ?

ಅದಕೆಂದೇ ನಾವಿಂದು ಬ್ರಹ್ಮಸೂತ್ರಗಳಂಥ

ಸಚ್ಛಾಸ್ತ್ರಗಳಲಿರುವ ತತ್ವಗಳ ಚಿಂತಿಪೆವು
 
॥ ೫೭ ॥
 
"ತತ್ವವನು ಬಲ್ಲವರು ಇಂತು ಪೇಳುತಲಿಹರು

ವಿತತನವ ಶ್ರೀ ಹರಿಯು ಅತ್ಯುಪಾಸ್ಯನು ಅವನು

ಸುಜ್ಞಾನ, ಸುಖಪೂರ್ಣ, ಕರ ಚರಣ ಯುಕ್ತ

ಇಂತು ಪ್ರತಿಪಾದಿತನು ಆ ನಮ್ಮ ಪರಮಾತ್ಮ

ಆಗಲಾರನು ಬ್ರಹ್ಮ ಬರಿಯ ಬೆಳಕಿನ ರೂಪ

ಶಾಸ್ತ್ರಗಳ ಸಾರವನು ನಾವರಿಯಬೇಕು
 
॥ ೫೮ ॥
 
"ಬ್ರಹ್ಮನೆಂಬುದು ಒಂದು ಬೆಳಕು ಸಹ ಅಲ್ಲವೆ ?

ಹಾಗಾದರಲ್ಲೊಂದು ಕತ್ತಲೆಯ ತೆರೆ ಇಹುದೆ ?

ಇಂಥ ಕತ್ತಲೆಯಲ್ಲಿ ಬ್ರಹ್ಮನನು ಕಾಂಬುವುದೆ ?

ಮೋಕ್ಷವಹುದೆ ಬರಿಯ ಕತ್ತಲಿನ ತಡಕಾಟ ?

ಬ್ರಹ್ಮ ನಿರ್ಗು ಣನೆಂಬ ತತ್ವವದು ಮಿಥ್ಯ

ಎಮ್ಮ ಉದ್ಧರಿಪುದೆ ಇಂತಹ ತತ್ವ ?
 
ಹದಿಮೂರನೆಯ ಸರ್ಗ / 227
 
56
 
57
 
58
 
59
 
॥ ೫೯ ॥