This page has been fully proofread once and needs a second look.

"ಆಲಿಸು, ಓ, ಕಂದ! ಆಲಿಸೆನ್ನಯ ಮಾತ ಎಚ್ಚರಿಕೆಯಿಂದ
 

ನುಡಿಯುತಿಹೆ ಈ ಮಾತ ಸಂಪೂರ್ಣ ಅರಿವಿಂದ

ಪರಮಾತ್ಮ ನಿರ್ಗುಣನು ಎಂಬ ಭಾವನೆ ಮಿಥ್ಯ

ಕಲಿಯುಗದಲೀ ಮಾತು ಸುಖಕೆ ಸಾಧನವಿರದು

ಸಕಲ ಗುಣ ಪರಿಪೂರ್ಣ ಈ ವಾಸುದೇವ

ಮುಕುತಿ ಪೊಂದಲು ನೀನು ಆತನನೇ ಸ್ಮರಿಸು"
 
॥ ೫೨ ॥
 
ಪಂಡಿತೋತ್ತಮ ಪಿತರ ಈ ಮಾತನಾಲಿಸುತ

ಸುತನು ಅನುಭವಿಸಿದನು ಅತಿ ತೀವ್ರ ಗೊಂದಲವ

ತಂದೆಯಾ ನುಡಿಗಳಲ್ಲಿ ಸಂದೇಹವುಂಟಾಯ್ತು

ಸತ್ಯವನು ಶಾಸ್ತ್ರಾರ್ಥ ಒರೆಗಲ್ಲಿನಲ್ಲಿರಿಸಿ
 

ಸಂಸಾರ ಸಾಗರವ ದಾಟುವ ಬಯಕೆಯಲ್ಲಿ
ಲಿ
ನಿರ್ಗುಣೋಪಾಸನೆಯ ಶ್ರವಣ ಮಾಡಿದರು
 
॥ ೫೩ ॥
 
ವಿಹಿತ ಧರ್ಮದ ನಿರತ ಆ ತ್ರಿವಿಕ್ರಮರು

ಭವಿಗಳಲಿ ಶ್ರೇಷ್ಠರು, ಶ್ರೇಷ್ಠ ಅನುಭಾವಿಗಳು

ಅತಿ ತೀಕ್ಷ್ಮತಿಯನ್ನು ಹುಟ್ಟಿನಲೇ ಪಡೆದವರು

ಕಲಿಗಾಲ ಬಲದಿಂದ ವ್ಯಾಕುಲವ ಹೊಂದಿದರು

ಶಾಸ್ತ್ರ ಪ್ರಮೇಯದಲಿ ಗೊಂದಲವ ಕಾಣುತ್ತ

ಒಮ್ಮೆ ಇಂತೆಂದವರು ಆಲೋಚಿಸಿದರು
 
॥ ೫೪ ॥
 
"ಸತ್ಯವತೀ ಸುತರಿಂದ ರಚಿತವಾಗಿಹ ಸೂತ್ರ

ತತ್ವ ನಿರ್ಣಯಕೆಲ್ಲ ಆಧಾರ ಸೂತ್ರ

ಈ ಬ್ರಹ್ಮಸೂತ್ರಕ್ಕೆ ಏಕವಿಂಶತಿ ಭಾಷ್ಯ

ಇವುಗಳಲ್ಲಿ ಯಾವುವೂ ಮೂಲಕ್ಕೆ ಸರಿಯಲ್ಲ

ಒಂದಕ್ಕೆ ಮತ್ತೊಂದು ತದ್ವಿರುದ್ಧ

ಇವುಗಳ ಪ್ರಾಮಾಣ್ಯ ಸ್ವೀಕರಿಸಲಾರೆ"
 
226 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
52
 
53
 
54
 
55
 
॥ ೫೫ ॥