This page has been fully proofread once and needs a second look.

ಆ ಪಂಡಿತೋತ್ತಮರಿಗೆ ಪತ್ನಿಯೋರ್ವಳು ಇದ್ದು

ಅನುರೂಪ ದಾಂಪತ್ಯ ಅವರದಾಗಿತ್ತು

ವಾತ್ಸಲ್ಯಮಯಿ ಆಕೆ ಶ್ರೀ ಕೃಷ್ಣ ಭಕ್ತಿ

ಸಕಲ ಸದ್ಗುಣ ಭರಿತೆ, ಸೌಜನ್ಯ ಶೀಲೆ

ವಿಧಿಬರಹದಿಂದವಳು ಪುತ್ರ ಶೋಕವ ಹೊಂದಿ

ಸಂತಾನ ಪಡೆಯಲು ಹರಿ ಹರರ ಸ್ತುತಿಸಿದಳು.
 
॥ ೪೪ ॥
 
ಹರಿ ಹರರ ಕೃಪೆಯಿಂದ ಆ ಸೂರಿಪತ್ನಿ

ಸುತರತ್ನವೊಂದನ್ನು ಶೀಘ್ರದಲ್ಲಿ ಪಡೆದಳು

ವಿಬುಧ ಸಭೆಯೆಂಬುವ ಶ್ರೇಷ್ಠ ಪಟ್ಟಣದಲ್ಲಿ

ರತ್ನ ಪರಿವೀಕ್ಷಕರು ರತ್ನಗಳ ಮೌಲ್ಯವನು

ನಿರ್ಧರಿಸಲಾಗದೆ ಕೈಕಟ್ಟಿ ಕುಳಿತಂತೆ

ಆ ಪುತ್ರರತ್ನದ ಮೌಲ್ಯ ತಿಳಿಯದೆ ಹೋಯ್ತು
 
॥ ೪೫ ॥
 
ತಂದೆ, ಆ ನಂದನನ ವದನೇಂದುವನು ನೋಡಿ

- ತನ್ನ ಕುಲ ಉದ್ರಿಪ ಸುತನು ಇವನೆಂದರಿತು

ಕೃತ ಕೃತ್ಯ ಭಾವದಲಿ ಆನಂದ ಪೊಂದಿದರು

ಜಾತಕರ್ಮಾದಿಗಳ ವಿಹಿತದಲಿ ಪೂರೈಸಿ

ಸೂಕ್ತ ಹೆಸರೊಂದನ್ನು ಸುತನಿಗಿಡಬೇಕೆಂದೆನಿಸಿ

ತ್ರಿವಿಕ್ರಮನೆಂದವಗೆ ಹೆಸರನಿರಿಸಿದರು
 
॥ ೪೬ ॥
 
ಆ ಸೂರಿಪೋತನು ಅಚ್ಚರಿಯ ಕೂಸು

ಕಲಭಾಷೆಯಲ್ಲಿಯೇ ಶ್ಲೋಕಗಳನೆಲ್ಲ

ಯಾವ ದೋಷವೂ ಇರದೆ ರಚಿಸುವಂತಹ ಕೂಸು
 

ಆಕಾಶದಲ್ಲಿರುವ ಆ ಪೂಜ್ಯ ಸೂರ್ಯನು

ಉದಿಸಿದ ಕ್ಷಣದಲ್ಲೇ ಪ್ರಖರವಾಗಿರುವಂತೆ

ಈ ಶಿಶುವೂ ಪ್ರತಿಭೆಯ ಪ್ರಖರತೆಯ ತೋರಿತ್ತು
 
224 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥