This page has been fully proofread once and needs a second look.

ಪುರುಷ ಲಕ್ಷಣವನ್ನು ಚೆನ್ನಾಗಿ ಅರಿತವರು

ಮಧ್ವಮುನಿಗಳ ಸಕಲ ಅವಯವನು ನೋಡಿ

ಲಕ್ಷಣದ ಶಾಸ್ತ್ರಕ್ಕೆ ಇದು ನಿದರ್ಶನವೆಂದು

ಅವಯವದಿ ಅಧ್ಯಯನಕಿದುವೆ ಮಾದರಿಯೆಂದು

ಒಮ್ಮತದಿಂ ನಿರ್ಧರಿಸಿ ತೀರ್ಮಾನಿಸಿದರು

ಇಂತಿರಲು ನಾವವರ ಬಣ್ಣಿಪುದು ಸರಿಯೆ ?
 
॥ ೩೬ ॥
 
ಸಭೆಯಲ್ಲಿ ಶ್ರೀ ಮಧ್ವಾಚಾರ್ಯರು

 
ಮಧ್ವದರ್ಶನ ಬಯಸಿ ಕಾತುರದಿ ನಿಂದರು

ಸಾವಿರದ ಸಂಖ್ಯೆಯಲ್ಲಿ ಆ ಹಳ್ಳಿಗಳ ಮಂದಿ

ದರ್ಶನಾರ್ಥಿಗಳಲ್ಲಿ ನೂರಾರು ಮಂದಿ

ನೂಕುನುಗ್ಗಲಿಗಂಜಿ ದೂರವೇ ಉಳಿದರು

ತಮ್ಮ ದರ್ಶನ ಭಾಗ್ಯ ಎಲ್ಲರಿಗೂ ಸಿಗಲೆಂದು

ಮಧ್ವಮುನಿ ಎದೆಯನ್ನು ಎತ್ತರಿಸಿ ನಿಂದರು
 
॥ ೩೭ ॥
 
ಅರಳಿರುವ ಕಣ್ಣುಗಳು, ಜೋಡಿಸಿಹ ಕೈಗಳು

ವಿನಯ ಭೂಷಿತರಾಗಿ ಆನಂದ ತೀರ್ಥರು

ಪರಮ ಗೌರವದಿಂದ ತಮ್ಮನ್ನು ಸ್ವಾಗತಿಸಿ

ಸತ್ಕರಿಸಿದಾ ಮಂದಿಯನು ತ್ವರಿತದಲ್ಲಿ ಜೊತೆಗೂಡಿ

ಶ್ರೀ ಹರಿಗೆ ಪ್ರಿಯವಾದ ಮತ್ತೊಂದು ಮಂದಿರವ

ಭಕ್ತಿಯಲಿ ಹರಿನಾಮ ಜಪಿಸುತ್ತ ಸೇರಿದರು,
 
॥ ೩೮ ॥
 
ಜಯಸಿಂಹನೇರ್ಪಡಿಸಿ ರಾಜ ಸಭೆಯೊಂದ

ನೂರಾರು ಜನರನ್ನು ಆಹ್ವಾನಿಸಿದ್ದ

ಆ ರಾಜಸಭೆಯಲ್ಲಿ ಮಧ್ವಮುನಿ ಅಧ್ವರ್ಯು

ರಾಜರು ಬೆಳಗಿದರು ತಾರೆಗಳ ತೆರದಲ್ಲಿ
 

ಆ ತಾರೆಗಳ ನಿವಹದಲಿ ಜಯಸಿಂಹ ಮಂಗಳನು
 

ಈ ನಕ್ಷತ್ರ ಮಂಡಲದಿ ಮಧ್ವರೇ ಚಂದ್ರಮರು
 
222 / ಶ್ರೀ ಸುಮಧ್ಯ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥