This page has been fully proofread once and needs a second look.

ಮಧ್ವ ಮುನಿಗಳ ನಡಿಗೆ ಅತಿ ಗಂಭೀರವಹುದು

ಗತಿಯು ಅತಿ ತ್ವರಿತ; ಆದರೂ ತೋರುವುದು ಅತಿ ನಿಧಾನ

ಯುವ ಕೇಸರಿಯ ತೆರದಿ ಗಂಭೀರ ಹೆಜ್ಜೆಗಳು

ಪಾದಪಲ್ಲವವೆರಡು ಅತಿ ಕೆಂಪು ಬಣ್ಣ

ಇಂಥ ಅಡಿಗಳನಿಟ್ಟು ಆನಂದ ತೀರ್ಥರು

ಇಡಿಯ ಭೂಮಂಡಲವ ಪಾವನಗೊಳಿಸಿದರು
 
॥ ೨೮ ॥
 
ಮಧ್ವಮುನಿಗಳ ಉಗುರ ಆ ದಿವ್ಯ ಕಾಂತಿಯು

ಪದ್ಮರಾಗದ ಮಣಿಯ ಕೆಂಪ ಹೋಲುತಲಿತ್ತು

ವರಕೂರ್ಮನಂತಿತ್ತು ಅವರ ಮುಂಗಾಲುಗಳು

ಅತಿ ಗೂಢವಹುದವರ ಪಾದದ ಹರಡಿಗಳು

ಸುರವರ್ಯ ಕರಗಳಲ್ಲಿ ಸೇವ್ಯ ಆ ಜಂಘಗಳು
 

ತೊಡೆಯೆರಡು ಆನೆಯ ಸೊಂಡಿಲುಗಳಂತೆ
 
॥ ೨೯ ॥
 
ಶುಭ ಶುದ್ಧ ಕಟಿಯಲ್ಲಿ ರಾಜಿಸುತ್ತಿಹ ವಸ್ತ್ರ

ಆ ಬಾಹು ವಸ್ತ್ರವು ಶುದ್ಧ ರೇಷಿಮೆಯಹುದು

ಮಧ್ವರಾ ಉವರಡದರದಲಿ, ಕಂಠ, ಲಲಾಟದಲಿ

ಮೂರು ಸುಸ್ಪಷ್ಟ ಶ್ರೇಷ್ಠತಮ ರೇಖೆಗಳು

ಪ್ರಕಟಗೊಂಡಿಹವಲ್ಲಿ ಶೋಭಾಯಮಾನದಲ್ಲಿ
ಲಿ
ಮಧ್ವ ಕಾಯದ ಸೊಬಗು ಅತಿ ವರ್ಣನೀಯ
 
॥ ೩೦ ॥
 
ಮಧ್ವಮುನಿ ಹೊದೆದಿರುವ ಆ ಶಾಲಿನ ಸೊಬಗು !

ಅತಿ ನವಿರು, ಕೋಮಲ, ಅತಿ ಗಾಢ ಕೆಂಪು !

ಈ ಕ್ಷಣದಿ ಉದಿಸಿರುವ ಸೂರ್ಯ ಕಿರಣದ ತೆರದಿ

ಮನಸೂರೆಗೈಯುವುದು ನಯವಾದ ಉಣ್ಣೆಯದು

ಇಂಥ ಶಾಲನು ಹೊದೆದ ಆ ಮಧ್ವಮು
ನಿಗಳು
ಸ್ವರ್ಣ ಶಿಖರವ ಪಡೆದ ಮೇರುಗಿರಿಯಾದರು
 
220 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
31
 
॥ ೩೧ ॥