This page has been fully proofread once and needs a second look.

ಶುದ್ಧ ಸ್ವರೂಪರೂ ಪರಿಶುದ್ಧ ಚಿತ್ತರೂ

ವಿಭುಗಣದ ಪ್ರಭುಗಳು ಆನಂದತೀರ್ಥರು

ಎಡೆಬಿಡದೆ ಎಲ್ಲೆಡೆಯೂ ಸಂಚಾರ ಮಾಡುತ್ತ

ಎಡರು ತೊಡರಿಲ್ಲದೆಯೆ ಪಯಣವನ್ನು ಸಾಗಿಸುತ

ಸುರಸಿಂಧು ಗಂಗೆಯು ಪ್ರವಹಿಸುವ ಪರಿಯಲ್ಲಿ

ಪಯಣದ ಹಾದಿಯಲ್ಲಿ ಅತಿಶಯದಿ ಮೆರೆದರು
 
॥ ೮ ॥
 
ಮದನೇಶ್ವರ ದೇವಾಲಯದಲ್ಲಿ
 

 
ಈ ರೀತಿ ಪಯಣವನು ಸುಲಭದಲ್ಲಿ ಸಾಗಿಸುತ

ಅಲ್ಲಲ್ಲಿ ಶಿಷ್ಯರನ್ನು ಹೆಚ್ಚಾಗಿ ಗಳಿಸುತ್ತ

ಅತಿ ಶೀಘ್ರದಲ್ಲಿಯೇ ಆನಂದ ತೀರ್ಥರು

ಸ್ತಂಭಪದವೆಂಬುವ ಸ್ಥಳವನ್ನು ಸೇರಿ

ಲೋಕಪೂಜಿತನಾಗಿ ಮದನಾಧಿಪತಿ ಇರುವ

ದೇವಮಂದಿರವನ್ನು ಭಕ್ತಿಯಲ್ಲಿ ಹೊಕ್ಕರು
 
॥ ೯ ॥
 
ಆ ಸ್ಥಳದಿ ರಾತ್ರಿಯನ್ನು ಅಲ್ಲಿಯೇ ಕಳೆದು

ಮುಂಜಾನೆ ಲಗುಬಗನೆ ನಿತ್ಯವಿಧಿಗಳ ಮುಗಿಸಿ

ಸಜ್ಜಾಗಿ ನಿಂದಿರುವ ಗುರುಗಳನ್ನು ಕಂಡು
 

ಮು೦ಬರುವ ಪಯಣಕಿದು ಸೂಚನೆ ಎಂದರಿತು
 

ಶಿಷ್ಯರೆಲ್ಲರೂ ಇದನು ಸೂಕ್ಷ್ಮದಲ್ಲಿ ಗ್ರಹಿಸಿ
 

ಗುರುಗಳ ಒಡಗೂಡಿ ತೆರಳಲನುವಾದರು
 
॥ ೧೦ ॥
 
ಪಯಣಕ್ಕೆ ಅಣಿಯಾದ ಆ ಮಧ್ವ ಶಿಷ್ಯರು

ಕಾಷಾಯ ವಸ್ತ್ರಗಳ ಕಟ್ಟಿ ಸುತ್ತಿಟ್ಟು

ಸ್ವಯೋಗ್ಯ ಮುದ್ರೆಯ ದಂಡ ಕಮಂಡಲುಗಳ
 

ಮತ್ತಿತರ ಆಶ್ರಮದ ಎಲ್ಲ ಸಾಮಗ್ರಿಯನು

ಸುವ್ಯವಸ್ಥಿತವಾಗಿ ಕಟ್ಟಿಟ್ಟ ಬಳಿಕ

ಮುಂಬರುವ ಪಯಣಕ್ಕೆ ಸನ್ನದ್ಧರಾದರು
 
ಹದಿಮೂರನೆಯ ಸರ್ಗ / 215
 
8
 
10
 
11
 
॥ ೧೧ ॥