This page has been fully proofread once and needs a second look.

ಗಂಗಾ ಪ್ರವಾಹವನು ಹೋಲುವಾ ರೀತಿಯಲಿ

ಮಾಯಾವಾದಿಗಳೆಂಬ ಕ್ಷುದ್ರಪರ್ವತ ತ್ಯಜಿಸಿ

ಪರಮ ಸ್ನೇಹಿಗಳಾದ ಸಜ್ಜನರ ಮನವೊಲಿಸಿ

ಮುನ್ನಡೆದ ಆ ನಮ್ಮ ಆನಂದ ತೀರ್ಥರನು

ಉತ್ತುಂಗ ಪರ್ವತದ ಶಿಖರದಲ್ಲಿ ಪ್ರವಹಿಸುವ
 

ನದಿಗಳೋಪಾದಿಯಲ್ಲಿ ಸುಜನರನುಸರಿಸಿದರು
 
॥ ೪ ॥
 
ಫಲಪುಪ್ಷ್ಪ ತುಂಬಿರುವ ಉತ್ತುಂಗ ವೃಕ್ಷಗಳ

ಬಾಗಿಸುತ ಹರಿಯುವುದು ಗಂಗಾ ಪ್ರವಾಹ

ಬಾಗದ ವೃಕ್ಷಗಳ ಮುರಿಯುತ್ತ ಹರಿವುದದು

ಅಂತೆಯೇ ಈ ನಮ್ಮ ಆನಂದ ತೀರ್ಥರು

ಸುಮನಫಲ ಶೋಭಿತರಾದ ಸುಜನರನು ಹರಸುತ್ತ

ದೃಢಮನದ ಜನರನ್ನು ಮುರಿಯುತ್ತ ನಡೆದರು
 
॥ ೫ ॥
 
ಪಯಣದ ಸಂಭ್ರಮವು ಅಚ್ಚರಿಯ ಹುಟ್ಟಿಸಿತು

ವಿವಿಧ ದೇಶದ ಜನರ ವಿಧವಿಧದ ಸತ್ಕಾರ !

ಎಲ್ಲೆಡೆಯೂ ಪಸರಿಸಿತು ಮಧ್ವರಾ ಕೀರ್ತಿ
ಸರಿ

ಸಂ
ಸಾರ ಕ್ಷೇತ್ರಲೇಶದಲಿ ಮನನೊಂದ ಜನರೆಲ್ಲ

ಅವರೆಡೆಗೆ ಬಂದರು ಪರಿಹಾರ ತಿಳಿಯಲು

ಕಿಕ್ಕಿರಿದು ನೆರೆದಿತ್ತು ಅಭಿಮಾನಿ ಸಮುದಾಯ
 
॥ ೬ ॥
 
ಹರಿಪಾದ ಸಂಬಂಧ ಪಡೆದ ಮಹಿಮರು ಇವರು

ಲೋಕದೊಳು ಪಾವನರು, ಜೀವಸರ್ವೋತ್ತಮರು
 

ಮನುಜರಿಗೆ ಸುಲಭದಲ್ಲಿ ಗೋಚರಿಸದೆ ಇರುವ

ದೇವತೆಗಳಿಂದಲೂ, ದೇವಾನುಚರರಾದ ಗಂಧರ್ವರಿಂದಲೂ
 

ಮುನಿಗಣೋತ್ತಮರಿಂದ ಪೂಜಿತರು ಇವರು
 

ಇಂಥ ಮಹಿಮರ ಮಹಿಮೆ ಎಂತು ಬಣ್ಣಿಪುದು ?
 
214/ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
4
 
5
 
6
 
7
 
॥ ೭ ॥