This page has been fully proofread once and needs a second look.

"ಎರಡು ನಾಲಿಗೆಯುಳ್ಳ ಹಾವುಗಳು ನೀವು!

ಲೋಕಪತಿ ಶ್ರೀ ಹರಿಯ ಹೃದಯದಲಿ ಧರಿಸಿರುವ

ಸಕಲ ಸಜ್ಜನಕೆಲ್ಲ ಜ್ಞಾನದಮೃತ ಕೊಡುವ

ಮಧ್ವ ಮುನಿಯೆಂಬುವ ಮತ್ತೊಬ್ಬ ಖಗರಾಜ

ನಿಮ್ಮ ಸಿರಿಸಂಪದವ ನಾಶಗೊಳಿಸುವನು

ತ್ವರೆ ಮಾಡಿ ! ಪರ್ವತದ ಬಿಲಗಳನ್ನುನು ಸೇರಿರಿ
 
॥ ೫೨ ॥
 
"ಮಧ್ವನಾರಾಯಣನು ವೇದ ಚಕ್ರವ ಹಿಡಿದು

ತರ್ಕವೆಂಬುವ ಪಾಂಚಜನ್ಯವನ್ನು ಮೊಳಗಿಸುತ

ಪುರಾಣವೆಂಬುವ ಗದೆಯನ್ನು ಬೀಸುತ್ತ

ಪಂಚರಾತ್ರಗಳೆಂಬ ಖಡ್ಗವನು ಝಳಪಿಸುತ

ಬರಲಿಹನು ನಿಮ್ಮನ್ನು ನಿಗ್ರಹಿಸಲೆಂದು

ತ್ವ
ರೆಯಿಂದ ಧಾವಿಸಿರಿ, ಓ ಮಾಯಾವಾದಿಗಳೇ !"
 
॥ ೫೩ ॥
 
ಪ್ರಾ"ಗ್ರ್ಯವಾಟದಲ್ಲಿ ಚಾತುರ್ಮಾಸ್ಯ
 

 
ಮಾಯಾವಾದಿಗಳಲ್ಲಿ ದ್ವೇಷವನೆ ತಳೆದಿದ್ದ

ಸಜ್ಜನರು ಈ ರೀತಿ ನುಡಿದು ನಲಿದಾಡಲು

ಸ್ವಾರಾಮ ಎಂಬುವ ಗ್ರಾಮವನ್ನು ಬಿಟ್ಟು

ಪ್ರಾ"ಗ್ರ್ಯವಾಟದ ದೇವ ಮಂದಿರದಿ ಮಧ್ವರು

ಆನಂದ ಮೂರ್ತಿ ಆ ಗೋವಿಂದನ ನೆನೆದು

ನಾಲ್ಕು ತಿಂಗಳ ಕಾಲ ಅಲ್ಲಿ ನೆಲೆಸಿದರು
 
52
 
210 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
53
 
54
 
॥ ೫೪ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ

ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವ ವಿಜಯ ಮಹಾಕಾವ್ಯದ

ಆನಂದಾಂಕಿತ ಹನ್ನೆರಡನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ
 
.