This page has been fully proofread once and needs a second look.

"ವಿಬುಧಗಣವೆಂಬುವ ಚಂದ್ರ ಕಳೆಗುಂದಿಹನು

ದುರ್ವಾದಿಗಣವೆಂಬ ತಾರೆಗಳ ಮಂಡಲವು

ಅಳಿದುಳಿದ ಕಾಂತಿಯಲಿ ನಿಸ್ತೇಜವಾಗಿಹುದು

ಈ ಚಂದ್ರ ತಾರೆಗಳ ತೇಜೋವಿಹೀನತೆಗೆ

ಕಾರಣವು ತಾನಾಗಿ ವಿಶ್ವವನ್ನು ವ್ಯಾಪಿಸಿದ

ಅಂಧಕಾರವು ಈಗ ಕೊನೆಗೊಳ್ಳುತಿಹುದು
 
॥ ೪೮ ॥
 
ತನ್ನ ವಾಕ್ಕಿರಣಗಳ ನೆರವನ್ನು ಪಡೆಯುತ್ತ

ಬ್ರಹ್ಮಾದಿ ದೇವತೆಗಳಭಿಲಾಷೆ ಪೂರೈಸಿ

ಸಪ್ತವಿದ್ಯೆಗಳೆಂಬ ಅಶ್ವಗಳ ನೆರವಿಂದ

ಸಕಲ ಜಗಕೆಲ್ಲಕ್ಕೂ ಬೆಳಕನ್ನು ನೀಡುತ್ತ

ಕ್ರೀಡಾದಿ ಗುಣಭರಿತ ಆನಂದ ತೀರ್ಥರು

ರವಿಯ ತೆರದಲಿ ಹೊಳೆದು ಬೆಳಗುವುದ ಕಾಣಿರೇ ?
 
॥ ೪೯ ॥
 
ಬ್ರಹ್ಮವೆಂಬುವ ಹೆಸರು ಶ್ರೀ ಹರಿಯೂ ಹೊತ್ತಿಹನು

ಸರ್ವರಿಗೆ ಆಧಾರ, ರಮ್ಯ ಸ್ವರೂಪನವ

ನೈದಿಲೆಯ ಹೂವಂತೆ ನೀಲವರ್ಣದ ಇವನು

ವೇದದಲಿ ವರ್ಣಿತನು ಗುಣಪೂರ್ಣನೆಂದು

ಇಂತಹ ಹರಿಪದದ ಆಶ್ರಿತನು ಮಧ್ವರವಿ

ಆತನನು ಮರೆಯಿಸಲು ಯಾರಿಗಾಹುದು ಸಾಧ್ಯ ?
 
॥ ೫೦ ॥
 
"ಓಡಿರಿ, ಓಡಿರಿ, ಓ ಮಾಯಾವಾದಿಗಳೇ

ಅಲ್ಲವೆಂದೆನ್ನದಿರಿ ವೇದ ವಚನಗಳನ್ನು

ಮಧ್ವ ಮುನಿಯೆಂಬುವ ನರಹರಿಯು ಈಗ

ಜಾಜ್ವಲ್ಯ ಕಾಂತಿಯಲ್ಲಿ ಪ್ರಜ್ವಲಿಸುತಿಹನು

ಸಿಂಹಗರ್ಜನೆಯಿಂದ ಅವಿವೇಕಿಗಳನಾತ

ಸೀಳುವನು ಹರಿತನುಡಿ ಎಂಬ ನಖದಿಂದ
 
ಹನ್ನೆರಡನೆಯ ಸರ್ಗ / 209
 
48
 
49
 
50
 
51
 
॥ ೫೧ ॥