This page has been fully proofread once and needs a second look.

ತನ್ನ ಮರಿಯನು ಕೊಂದ ಹಂದಿಯನು ಕಂಡು
ಸಿಂಹ ತಾ ಹಂದಿಯನು ಹೇಗೆ ಬಿಡದಿಹುದೊ
ಅಂತೆಯೇ ಆನಂದ ತೀರ್ಥರೆಂಬುವ ಸಿಂಹ
ಗ್ರಂಥಪಾಲಕನಾದ ಶಂಕರನ ಬೆದರಿಸಿ
ಗ್ರಂಥಗಳ ಅಪಹರಿಸಿ ನಡೆದಿದ್ದ ದುರುಳನನು
ಕ್ಷಮಿಸದೆ ಶಿಕ್ಷಿಸಲು ನಿಶ್ಚಯವ ಮಾಡಿದರು ॥ ೪೪ ॥
 
ಈ ಹಿಂದೆ ಆನಂದ ತೀರ್ಥರ ಕೂಡೆ
ವಾಗ್ಯುದ್ಧದಲಿ ಸೋತ ಪುಂಡರೀಕನು ಆಗ
ಮಧ್ವರಿಗೆ ಭಯಪಟ್ಟು ಹಿಂದಕ್ಕೆ ಅಡಗಿದ್ದ
ಪದ್ಮತೀರ್ಥಗೆ ಹಿತವನುಂಟು ಮಾಡಲು ಬಯಸಿ
ಹಲವಾರು ಅಂಶಗಳ ಸಭೆಯ ಮುಂದಿರಿಸಿದನು
ಮಧ್ವರಿದ ಖಂಡಿಸಿದರೈದಾರು ವಾಕ್ಯದಲಿ ॥ ೪೫ ॥
 
ಪದ್ಮತೀರ್ಥಾದಿಗಳ ಪರಾಭವ
 
ದ್ವಾಪರದ ಪಾರ್ಥನಾ ತೆರದಿ ಈ ಮಧ್ವರು
ಪುಂಖಾನುಪುಂಖದಲಿ ವಾಗ್ಬಾಣ ಬೀರುತ್ತ
ಹರಿಯ ಸ್ವರೂಪವನು ನಿರ್ಧರಿಸಿ ತೋರುತ್ತ
ತಡೆಯಿರದ ಜಲಧಾರೆಯಂತಿರುವ ನುಡಿಯಿಂದ
ಖಂಡಿಸಲು ಬಾರದ ತರ್ಕನಿಪುಣತೆಯಿಂದ
ಆ ಪದ್ಮತೀರ್ಥನನು ಗೆಲಿದು ಮೆಟ್ಟಿದರು ॥ ೪೬ ॥
 
ಶ್ರೀ ಮಧ್ವಶಿಷ್ಯರು ಹಾಡಿದ ಶ್ರೀ ಮಧ್ಯಮಾಹಾತ್ಮ್ಯ
 
"ಎಲವೆಲವೊ ಚೋರರೆ ! ಭಗವಂತ ನಿಂದಕರೆ !
ನಿಲ್ಲಿಸಿರಿ ಈ ನಿಮ್ಮ ದುಷ್ಕೃತ್ಯಗಳನು
ನಿಲ್ಲಿಸಿರಿ ಈ ಜಗವು ಮಾಯವೆಂಬುವ ತರ್ಕ
ಓಡಿರಿ, ಓಡಿರಿ, ಇಲ್ಲಿಂದ ಓಡಿರಿ!
ಜನರೆಲ್ಲ ನಿಮ್ಮನ್ನು ಅಟ್ಟುತ್ತ ಬರುತಿಹರು
ಗುಹೆಗಳನು ಸೇರುವ ಕಾಲ ಒದಗಿದೆ ನಿಮಗೆ ॥ ೪೭ ॥