This page has been fully proofread once and needs a second look.

ತನ್ನ ಮರಿಯನು ಕೊಂದ ಹಂದಿಯನ್ನು ಕಂಡು
 

ಸಿಂಹ ತಾ ಹಂದಿಯನು ಹೇಗೆ ಬಿಡದಿಹುದೊ

ಅಂತೆಯೇ ಆನಂದ ತೀರ್ಥರೆಂಬುವ ಸಿಂಹ

ಗ್ರಂಥಪಾಲಕನಾದ ಶಂಕರನ ಬೆದರಿಸಿ

ಗ್ರಂಥಗಳ ಅಪಹರಿಸಿ ನಡೆದಿದ್ದ ದುರುಳನನು

ಕ್ಷಮಿಸದೆ ಶಿಕ್ಷಿಸಲು ನಿಶ್ಚಯವ ಮಾಡಿದರು
 
॥ ೪೪ ॥
 
ಈ ಹಿಂದೆ ಆನಂದ ತೀರ್ಥರ ಕೂ
ಡೆ
ವಾಗ್ಯುದ್ದದಲ್ಧದಲಿ ಸೋತ ಪುಂಡರೀಕನು ಆಗ

ಮಧ್ವರಿಗೆ ಭಯಪಟ್ಟು ಹಿಂದಕ್ಕೆ ಅಡಗಿದ್ದ

ಪದ್ಮತೀರ್ಥಗೆ ಹಿತವನುಂಟು ಮಾಡಲು ಬಯಸಿ

ಹಲವಾರು ಅಂಶಗಳ ಸಭೆಯ ಮುಂದಿರಿಸಿದನು

ಮಧ್ವರಿದ ಖಂಡಿಸಿದರೈದಾರು ವಾಕ್ಯದಲ್ಲಿ
 
॥ ೪೫ ॥
 
ಪದ್ಮತೀರ್ಥಾದಿಗಳ ಪರಾಭವ
 

 
ದ್ವಾಪರದ ಪಾರ್ಥನಾ ತೆರದಿ ಈ ಮಧ್ವರು

ಪುಂಖಾನುಪುಂಖದಲಿ ವಾಗ್ದಾಬಾಣ ಬೀರುತ್ತ

ಹರಿಯ ಸ್ವರೂಪವನು ನಿರ್ಧರಿಸಿ ತೋರುತ್ತ

ತಡೆಯಿರದ ಜಲಧಾರೆಯಂತಿರುವ ನುಡಿಯಿಂದ

ಖಂಡಿಸಲು ಬಾರದ ತರ್ಕನಿಪುಣತೆಯಿಂದ

ಆ ಪದ್ಮತೀರ್ಥನನು ಗೆಲಿದು ಮೆಟ್ಟಿದರು
 
॥ ೪೬ ॥
 
ಶ್ರೀ ಮಧ್ವಶಿಷ್ಯರು ಹಾಡಿದ ಶ್ರೀ ಮಧ್ಯಮಾಹಾತ್
 
ಮ್ಯ
 
"ಎಲವೆಲವೊ ಚೋರರೆ ! ಭಗವಂತ ನಿಂದಕರೆ !

ನಿಲ್ಲಿಸಿರಿ ಈ ನಿಮ್ಮ ದುಷ್ಕೃತ್ಯಗಳನ್ನು
ನು
ನಿಲ್ಲಿಸಿರಿ ಈ ಜಗವು ಮಾಯವೆಂಬುವ ತರ್ಕ

ಓಡಿರಿ, ಓಡಿರಿ, ಇಲ್ಲಿಂದ ಓಡಿರಿ!

ಜನರೆಲ್ಲ ನಿಮ್ಮನ್ನು ಅಟ್ಟುತ್ತ ಬರುತಿಹರು
 

ಗುಹೆಗಳನ್ನು ಸೇರುವ ಕಾಲ ಒದಗಿದೆ ನಿಮಗೆ
 
208 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥