This page has been fully proofread once and needs a second look.

ಮೊದಮೊದಲು ಪ್ರಸ್ಪಹ್ರಸ್ವತ್ವವೆಂಬ ಕಾರಣದಿಂದ
ವಾ

ವತ್ಸಾ
ನುವೃತ್ತಿಯಲ್ಲಿ ಮಾತ್ರೆಗಳ ಕಾಲದ ದ್ವಿಪಾದ ಉಚ್ಚರಿಸಿ
 

ದೇವಾನುದೇವರಿಗೆ ಗೋಚರಿಸಿ ನಿಂದು

ಬಳಿಕ ಆ ಇತರ ವಿವೃತ್ತಿ ಉಚ್ಚರಿಸಿ

ಗೋವಿಂದ ಭಕ್ತರಿಹ ಆನಂದ ತೀರ್ಥರು
 

ಗೋವಿಂದ ನಂತೆಯೇ ಕಂಗೊಳಿಸಿ ಮೆರೆದರು
 
॥ ೩೨ ॥
 
ಮಂಗಳಾಂಗಗಳಿಂದ ಭಾವಗಳ ಪ್ರಕಟಿಸುತ

ಮೂರು ಲೋಕಗಳಲ್ಲಿ ಅಚ್ಚರಿಯ ಮೂಡಿಸುತ

ರಂಗವೆಂಬುವ ಸ್ವರದಿ ವೈಭವದಿ ಮೆರೆಯುತ್ತ

ಸುಸ್ವರದಿ ಶೋಭಿಸುತ ಕಂಗೊಳಿಪ ಆ ದನಿಯು

ಆನಂದ ತೀರ್ಥರ ಆ ವೇದವಾಣಿಯು

ಮತ್ತೊಬ್ಬ ದೌದ್ರೌಪದಿಯ ಸ್ವರದಂತೆ ತೋರಿತ್ತು
 
॥ ೩೩ ॥
 
ಔದಾರ್ಯದಿಂದಲೇ ಗಾಂಭೀರ್ಯ ಹುಟ್ಟುವುದು

ಗಾಂಭೀರ್ಯ ಔದಾರ್ಯ ಗುಣ ಭರಿತ ಮಧ್ವರು

ನಾನಾ ನಾದಗಳ ಶ್ಲಾಘಿಘ್ಯ ಅಭಿವ್ಯಕ್ತಿ

ಶಿಕ್ಷಾ ಲಕ್ಷಣವೇ ಮೈವೆತ್ತಿ ನಿಂತಂತೆ

ಗುರುವರೇಣ್ಯರ ಆ ವೇದದುಚ್ಚಾರಣೆಯು

ಅನುಪಮವು ಅತಿಶಯವು ಎಂದು ನಾ ಭಾವಿಪೆನು
 
॥ ೩೪ ॥
 
ಕಲ್ಪ ವೇದಾಂಗಗಳ, ವೇದಾರ್ಥ ನಿಯಮಗಳ

ಛಂದಸ್ಸು, ಶಾಸ್ತ್ರಗಳ ನಿಯಮಗಳ ಪ್ರಕಟಿಸುತ

ವ್ಯಾಕರಣ ಶಾಸ್ತ್ರದ ಒಳ ಹೊರಗ ತೋರಿಸುತ

ನಿರುಕ್ತದಲ್ಲಿನ ಶಬ್ದ ನಿರ್ವಚನದಲ್ಲಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತರು ಮಧ್ವರು

ವೇದವನು ಈ ರೀತಿ ವ್ಯಾಖ್ಯಾನಿಸಿದರು
 
ಹನ್ನೆರಡನೆಯ ಸರ್ಗ / 205
 
32
 
33
 
34
 
35
 
॥ ೩೫ ॥