This page has been fully proofread once and needs a second look.

"ಮಧ್ವಮುನಿಗಳ ಇಂಥ ತತ್ವಬೋಧನೆಯನ್ನು

ವಿಸ್ತರಿಸಿ ಬೆಳೆವುದಕೆ ಬಿಡುವುದು ಸಲ್ಲ

ನಮ್ಮ ಮತಕಿಂದೊದಗಿ ಬಂದಿಹುದು ಆಪತ್ತು

ಲೋಕಗಳು ಕ್ಷಯಿಸುವ ಪ್ರಲಯದ ಕಾಲದಲಿ

ರಭಸದಲಿ ನುಗ್ಗುವ ಪ್ರಲಯ ಜಲದಂತೆ

ಜಗದಲ್ಲಿ ಎಲ್ಲೆಲ್ಲೂ ನುಗ್ಗಿಹರು ವೈಷ್ಣವರು "
 
॥ ೧೬ ॥
 
ಈ ಮಾತುಗಳನಾಲಿಸಿದ ಮತ್ತೊಬ್ಬ ದುಷ್ಟ

ಪದ್ಮತೀರ್ಥರ ಮನವ ಚೆನ್ನಾಗಿ ಬಲ್ಲವನು

ದುರಭಿಮಾನವನು ಹೃದಯದಲಿ ತಳೆದವನು

ಮಂದಮತಿಯುಳ್ಳವನು ಅತಿ ಕುಟಿಲ ಮನದವನು

ತನ್ನವರ ಮನವನ್ನು ಹರುಷಗೊಳಿಸಲು ಎಂದು

ಧಾರ್ಷ್ಟ್ಯದ ನುಡಿಗಳನ್ನು ಏರುದನಿಯಲ್ಲಿ ನುಡಿದ
 
॥ ೧೭ ॥
 
"ಮಧ್ವಶಿಷ್ಯರ ತೇಜ ಅನುಪಮವು ದಿಟವು

ಶ್ರವಣ ಮಾತ್ರದಿ ನೀವು ಕರಗದಿರಿ ಇಂತು

ಭೀರುಗಳು, ಅಭಿಮಾನ್ಯ ಶೂನ್ಯರು ನೀವು

ನಿಮ್ಮ ಈ ಹುಂಬತನಕೆನ್ನ ಧಿಕ್ಕಾರ

ನವನೀತ ಕರಗುವುದು ಅಗ್ನಿಸ್ಪರ್ಶದ ಬಳಿಕ

ಆ ನವನೀತವೇ ಗಟ್ಟಿ ನಿಮ್ಮ ಮನಸುಗಳಿಗಿಂತ
 
" ॥ ೧೮ ॥
 
"ಪದ್ಮತೀರ್ಥಾದಿಗಳು ಶಂಕರರ ಶಿಷ್ಯರು

ದೇವಾದಿಗಳಿಗವರು ಬಾಧಕ ಜ್ಞಾನವನು

ಅದರ ವಿಷಯತ್ವವನ್ನು ಸಾಧಿಸುತ್ತಿಹರು

ದೇವಗುರುಗಳು ಕೂಡ ಲಜ್ಜೆ ಪಡುವಂತೆ

ಸುಖಕರದ ಅದೈದ್ವೈತ ವಿದ್ಯಾ ವಿಶಾರದರ

ದಿವ್ಯ ಸನ್ನಿಧಿಯಲ್ಲಿ ನಮಗೇಕೆ ಚಿಂತೆ ?
 
ಹನ್ನೆರಡನೆಯ ಸರ್ಗ / 201
 
16
 
17
 
18
 
19
 
॥ ೧೯ ॥