This page has not been fully proofread.

ಸಕಲ ಆಗಮಗಳಿಗೆ ವೇದ್ಯವಾಗಿಹ ರೂಪ
ಆನಂದ, ಜ್ಞಾನವೇ ಮೊದಲಾದ ಗುಣದಿಂದ
 
ಅಡಿಯಿಂದ ಮುಡಿವರೆಗೆ ಸಕಲ ಅವಯವದಿಂದ
 
ಮಾದಿ ರೂಪಗಳೂ, ನರಸಿಂಹ, ವಾಮನ
ಎಲ್ಲವೂ ಶ್ರೀ ಹರಿಯ ನಿರ್ಭೇದ ರೂಪ
ರೂಪವೈವಿಧ್ಯದಲಿ, ದೋಷ ಲೇಶವೂ ಇಲ್ಲ
 
ಹರಿಯ ಸ್ವರೂಪದ ದರುಶನದ ಭಾಗ್ಯ
ಅಧಿಕಾರಿಗಳಿಗುಂಟು, ಇತರರಿಗೆ ಇಲ್ಲ
ಸಂಪೂರ್ಣ ದರ್ಶನವು ಎಲ್ಲರಿಗೂ ಆಗದು
ಅವರವರ ಗುಣಗಳಿಗೆ ಅನುಸಾರವಾಗಿ
ಕೆಲವರಿಗೆ ಕಾಂಬುವುದು ಹರಿಪಾದ ಮಾತ್ರ
ಶಿರ, ನೇತ್ರ ದರ್ಶನವು ಅತ್ಯಧಿಕ ಪೂತರಿಗೆ
 
ಶ್ರೀ ಹರಿಯ ರೂಪವು ಅತ್ಯಧಿಕ ಕಾಂತಿಯದು
 
ಹಲವಾರು ರಮಣೀಯ ಕಾಂತಿಗಳ ಮಿಲನ
ಉದಯ ಸೂರ್ಯನ ತರಹ ಬಂಗಾರದ ಬೆಳಗು
 
ಮುತ್ತಿನ ಹಾರಗಳ ಧವಳ ಕಾಂತಿಯ ಬೆಡಗು
ಇಂದ್ರನೀಲದ ತೆರದಿ ನೀಲವರ್ಣದ ಕಾಂತಿ
ಸುಖ, ಬೋಧ, ಸೌರಭ, ರೂಪ, ಗುಣ, ಸಂಗಮ
 
ಮೂರ್ಜಗದಿ ಕಾಣದಿಹ ಅಚ್ಚರಿಯು ಇಲ್ಲಿಹುದು
ಶ್ರೀ ಹರಿಯ ರೂಪವದು ಅಷ್ಟೊಂದು ಅದ್ಭುತವು
ಪ್ರತಿಬಾರಿ ಶ್ರೀ ಹರಿಯ ಕಂಡಾಗಲೂ ಕೂಡ
"ಸೋಜಿಗವು ! ಸೋಜಿಗವು ! " ಎಂಬ ಉದ್ಗಾರ
ವೈಕುಂಠ ಲೋಕದಲಿ ಇಂದಿರಾಪತಿ ರೂಪ
 
""
 
ಮುಕರನು ಸರ್ವದಾ ಮದಗೊಳಿಸುತಿಹುದು
 
ಹನ್ನೊಂದನೆಯ ಸರ್ಗ / 193
 
72
 
73
 
74
 
75