This page has not been fully proofread.

ಸರ್ಗೋಪಸಂಹಾರ :
 
ಇಂತಹ ನುಡಿಗಳ ಜಲಧಾರೆಯಿಂದ
ಅರಿವೆಂಬ ಮಿಂಚನ್ನು ತನ್ನಲ್ಲಿ ಇರಿಸಿರುವ
ಮಧ್ವಮುನಿಗಳ ಶಿಷ್ಯಗಣವೆಂಬ ಮೇಘಗಳು
ಭವಭಯದ ಬೇಗೆಯಲ್ಲಿ ಪರಿತಪಿಸಿ ಬೆಂದಿರುವ
 
ಸಜ್ಜನರು ಎಂಬುವ ವೃಕ್ಷ ಸಮುದಾಯದಲ್ಲಿ
ಫಲಪುಷ್ಪಗಳನಿರಿಸಿ ಆನಂದ ನೀಡಿದವು
 
56
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹ
ಆನಂದಾಂಕಿತ ಹತ್ತನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ.
 
ಹತ್ತನೆಯ ಸರ್ಗ / 171