This page has not been fully proofread.

ಪ್ರಕಟವಾದಳು ಅಲ್ಲಿ ಭಾಗೀರಥಿ ದೇವಿ
ಭಯಭಕ್ತಿಯಿಂದವಳು ಬಹುದೂರದಿಂದ
ನಮಿಸಿದಳು ಆಚಾರ್ಯ ಪಾದಾರವಿಂದಕ್ಕೆ
ಅಪ್ರತಿಮ ಸುಂದರಿಯು ಲೋಕದೊಳು ಆಕೆ
ಇದ ನೋಡಿ ಬೆರಗಾಗಿ ಆ ಶಿಷ್ಯರೆಲ್ಲ
ವಿಸ್ಮಯದಿ ಕುಳಿತರು ಚಕಿತರಾಗಿ
 
ದೇಹಬಲದಲ್ಲೂ ಶಿಷ್ಯರನ್ನು ಮೀರಿಸಿದ ಗುರು
 
ಆನಂದ ತೀರ್ಥರು ಪಾಪ ಪರಿಹಾರಕರು
ಆದರೂ ನಡೆದರು ವಾರಣಾಸಿಯ ಕಡೆಗೆ
 
ಅಲ್ಲವರು ಮತ್ತೊಂದು ಮೋಜ ನಡೆಸಿದರು
ಶಿಷ್ಯರಲಿ ಹಲವರು ಬಲು ಗರ್ವಶಾಲಿಗಳು
ಬಾಹುಬಲದಲಿ ತಮಗೆ ಸಮರಿಲ್ಲ ಎಂಬುವರು
ಮಧ್ವಮುನಿ ಅವರನ್ನು ಕುರಿತು ಇಂತೆಂದರು
 
"ಗರುವ ಪಡದಿರಿ ನೀವು ಬಲವಂತರೆಂದು
ನೀವೆಲ್ಲ ಒಟ್ಟಾಗಿ ನಮ್ಮ ಮೇಲೆರಗಿರಿ
ದ್ವಂದ್ವ ಯುದ್ಧವ ನೀವು ನಮ್ಮೊಡನೆ ಮಾಡಿ
ನಿಮ್ಮೆಲ್ಲ ಶಕ್ತಿಯನ್ನು ಕಾಳಗದಿ ಬಳಸಿ
ಇಲ್ಲದಿರೆ ಗುರ್ವಾಜ್ಞೆ ಉಲ್ಲಂಘಿಸಿದರೆಂಬ
ಪಾತಕಕೆ ನೀವೆಲ್ಲ ಗುರಿಯಾಗಬಹುದು'
 
ಗುರುಗಳಾಡಿದ ಮಾತ ಕೇಳಿದಾ ಶಿಷ್ಯರು
ತಮ್ಮೊಳಗೆ ಹದಿನೈದು ಮಂದಿಯನು ಆಯ್ದರು
ಅವರೆಲ್ಲ ಒಟ್ಟಾಗಿ ಗುರುವೆಡೆಗೆ ನುಗ್ಗಿದರು
ಎಲ್ಲರನೂ ಒಟ್ಟಾಗಿ ಕೆಡವಿದರು ಗುರುಗಳು
"ಸಾಮರ್ಥ್ಯವಿದ್ದವರು ಮೇಲೇಳಿ ನೋಡುವ
 
ಎಂದೆನುತ ಮೆಲುನಗೆಯ ಕುಹಕವಾಡಿದರು
 
ಮಧ್ವಬಂಧಕ್ಕೆ ಸಿಲುಕಿ ನಲುಗಿದರು ಶಿಷ್ಯರು
 
166 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39