This page has not been fully proofread.

ಗುರುಗಳನು ಕಾಂಬುವ ತವಕದಲಿ ಶಿಷ್ಯರು
ಗಂಗೆಯನು ನಾವೆಯಲಿ ತ್ವರಿತದಲಿ ದಾಟ
 
ತೀರವನು ಸೇರಿದರು ಬಲು ಬೇಗ ಬೇಗ
ಗಂಗೆಯ ತೀರವದು ಬಲು ಶೋಭಿಸಿತ್ತು
 
ಜನನಿಬಿಡ ಜಂಗುಳಿ ಜಗಜಗಿದ ದೀಪಗಳು
 
ಪಂಡಿತರ ಸೋಮವನು ಕಂಡರಾ ಶಿಷ್ಯರು
 
ಗಂಗೆಯ ತಟದಲ್ಲಿ ಪಂಡಿತೋತ್ತಮ ಸಭೆಯು
ಸುರಲೋಕದಲ್ಲಿನ ಸಭೆಯಂತೆ ಕಂಡಿತು
ಆನಂದ ತೀರ್ಥರು ವೇದಾರ್ಥ ನಿಪುಣರು
ಅರ್ಥ ಸೂಕ್ಷ್ಮತೆಯನ್ನು ಸುಲಭದಲ್ಲಿ ಬಿಡಿಸುವರು
ದೇವಸಭೆಯಲಿ ಕುಳಿತ ಬ್ರಹ್ಮದೇವರ ತರದಿ
ಕಂಗೊಳಿಸಿ ಮೆರೆದಿದ್ದರಾನಂದ ತೀರ್ಥರು
 
ಹಸ್ತಿನಾಪುರದಲ್ಲಿ ಚಾತುರ್ಮಾಸ್ಯ
 
ಮರಳಿ ತೆರಳಿದರಾಗ ಆನಂದ ತೀರ್ಥರು
ಹಸ್ತಿನಾಪುರದತ್ತ ಪಯಣ ಮುಂದರಿಸಿದರು
ಆಲ್ಲೊಂದು ಸ್ಥಳದಲ್ಲಿ ಗಂಗೆಗತಿ ದೂರದಲಿ
ಏಕಾಂತವಾಗಿದ್ದ ಮಠವೊಂದರಲ್ಲಿ
ಶ್ರೀ ಹರಿಯ ಚಿಂತನೆಯ ಎಡೆಬಿಡದೆ ಮಾಡುತ್ತ
ನಾಲ್ಕು ತಿಂಗಳ ಕಾಲ ವಾಸ್ತವ್ಯ ಹೂಡಿದರು
 
ಗಂಗೆಯಿಂದಲೂ ಪೂಜಿತರು
 
ಆನಂದ ತೀರ್ಥರಿಗೆ ಸೇವೆ ಸಲ್ಲಿಸಲೆಂದು
 
ದೇವನದಿ ಗಂಗೆಯು ಕವಲಾಗಿ ಒಡೆದು
ಭೂಮಿಯನ್ನು ಭೇದಿಸುತ ಆವರ ಬಳಿ ತೆರಳಿದಳು
 
ರುದ್ರಾದಿ ದೇವರಿಗೆ ಭಾರತಿಯು ಪೂಜ್ಯಳು
ಆಕೆಯೂ ಸೇವಿಪಳು ಆನಂದ ತೀರ್ಥರನು
 
ಗಂಗೆಯ ಸೇವೆಯಲಿ ಅಚ್ಚರಿ ಇನ್ನೇನು ?
 
ಹತ್ತನೆಯ ಸರ್ಗ / 165
 
32
 
33
 
34
 
35