This page has been fully proofread once and needs a second look.

"ಗಂಗೆ ಹರಿದಿಹಳಿಲ್ಲಿ ಭೀಬತ್ಸ ರೂಪದಲಿ

ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?

ನಾವೆಗಳ ನೆರವಿಲ್ಲದೆ ತೀರವನ್ನು ಸೇರಿದಿರೆ ?"

ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
 

ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
 

ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
 
॥ ೧೬ ॥
 
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ

ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ

ಯಾವ ಪರಮಾತ್ಮನು ಸೂರ್ಯನೊಳು ಅಡಗಿಹನೊ

ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು

ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"

ಎಂದವರು ಉಸುರಿದರು ತುರುಕ ಭಾಷೆಯಲ್ಲಿ
 
॥ ೧೭ ॥
 
ಆನಂದ ತೀರ್ಥರ ಮೇರುತರ ಗಾಂಭೀರ್ಯ

ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು

ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು

ಕಾಲ ದೇಶಕ್ಕೆ ತಕ್ಕ ಸ್ಪುಫುಟವಾದ ಮಾತು

ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ

ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
 
॥ ೧೮ ॥
 
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !

ದಂಡಾರ್ಹವೆನಿಸಿದರು ರಾಜಭಟರಿಗೆ ಅವರು

ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು

ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
 

ಆದರೂ ಸಂಯಮದಿ ಮಾತುಕತೆ ನಡೆಸಿದರು

ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
 
ಹತ್ತನೆಯ ಸರ್ಗ / 161
 
16
 
17
 
18
 
19
 
॥ ೧೯ ॥