2023-02-26 12:36:06 by ambuda-bot
This page has not been fully proofread.
  
  
  
  "ಗಂಗೆ ಹರಿದಿಹಳಿಲ್ಲಿ ಭೀಬತ್ಸ ರೂಪದಲಿ
  
  
  
ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?
ನಾವೆಗಳ ನೆರವಿಲ್ಲದೆ ತೀರವನ್ನು ಸೇರಿದಿರೆ ?"
ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
   
  
  
  
ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
   
  
  
  
ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
   
  
  
  
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ
ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ
ಯಾವ ಪರಮಾತ್ಮನು ಸೂರನೊಳು ಅಡಗಿಹನೊ
ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು
ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"
ಎಂದವರು ಉಸುರಿದರು ತುರುಕ ಭಾಷೆಯಲ್ಲಿ
   
  
  
  
ಆನಂದ ತೀರ್ಥರ ಮೇರುತರ ಂಭೀರ್ಯ
ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು
ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು
ಕಾಲ ದೇಶಕ್ಕೆ ತಕ್ಕ ಸ್ಪುಟವಾದ ಮಾತು
ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ
ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
   
  
  
  
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !
ದಂಡಾರ್ಹವೆನಿಸಿದರು ರಾಜಭಟರಿಗೆ ಅವರು
ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು
ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
   
  
  
  
ಆದರೂ ಸಂಯಮದಿ ಮಾತುಕತೆ ನಡೆಸಿದರು
ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
   
  
  
  
ಹತ್ತನೆಯ ಸರ್ಗ / 161
   
  
  
  
16
   
  
  
  
17
   
  
  
  
18
   
  
  
  
19
   
  
  
  
  
ಆಕೆಯನು ಎದುರಿಸುತ ಹೇಗೆ ಬಂದಿರಿ ತಾವು ?
ನಾವೆಗಳ ನೆರವಿಲ್ಲದೆ ತೀರವನ್ನು ಸೇರಿದಿರೆ ?"
ಈ ಪರಿಯೊಳಾ ನೃಪತಿ ಪರಿಪರಿಯ ಪ್ರಶ್ನೆಗಳ
ಸರಮಾಲೆಯನೆ ಸುರಿಸಿ ಚಕಿತಗೊಂಡುದ ಕಂಡು
ನಸುನಗುತ ನುಡಿದರು ಶ್ರೀ ಹರಿಯ ಭಕ್ತರು
"ಯಾವ ದೇವರು ಜಗವ ದಿನನಿತ್ಯ ಬೆಳಗುವನೊ
ಯಾರ ಪ್ರಖರತೆಯಿಂದ ಜಗವು ಜಗಜಗಿಸುವುದೊ
ಯಾವ ಪರಮಾತ್ಮನು ಸೂರನೊಳು ಅಡಗಿಹನೊ
ಆ ದಿವ್ಯ ಚೇತನನ ಪರಮ ಕೃಪೆಯಲಿ ನಾವು
ಈ ಬಗೆಯ ಸಾಹಸದ ಕಾರ್ಯವನು ಎಸಗಿದೆವು"
ಎಂದವರು ಉಸುರಿದರು ತುರುಕ ಭಾಷೆಯಲ್ಲಿ
ಆನಂದ ತೀರ್ಥರ ಮೇರುತರ ಂಭೀರ್ಯ
ಉತ್ಕೃಷ್ಟ ಪೌರುಷ, ಧೈರ್ಯ ಸಾಹಸವನ್ನು
ಅವರಲ್ಲಿ ನೆಲೆಗೊಂಡ ಪೂಜ್ಯತೆ, ವಿದ್ವತ್ತು
ಕಾಲ ದೇಶಕ್ಕೆ ತಕ್ಕ ಸ್ಪುಟವಾದ ಮಾತು
ಈ ಎಲ್ಲವನೂ ಬೆರಗಿನಲಿ ಗಮನಿಸಿದ ಆ ರಾಜ
ತನ್ನರ್ಧ ರಾಜ್ಯವನೇ ಕೊಟ್ಟನುಂಬಳಿಯಾಗಿ
ಎಂಥದೀ ಸೋಜಿಗವು ! ಎಂಥದೀ ಅದ್ಭುತವು !
ದಂಡಾರ್ಹವೆನಿಸಿದರು ರಾಜಭಟರಿಗೆ ಅವರು
ರಾಜ್ಯಾರ್ಹರೆನಿಸಿದರು ರಾಜನಿಗೆ ಅವರು
ಮುನ್ನುಗ್ಗಬಹುದಿತ್ತು ಬಾಹುಬಲ ತೋರುತ್ತ
ಆದರೂ ಸಂಯಮದಿ ಮಾತುಕತೆ ನಡೆಸಿದರು
ಸಂಕಷ್ಟ ಎದುರಿಸಲು ಸಂಯಮವು ಅತಿ ಮುಖ್ಯ
ಹತ್ತನೆಯ ಸರ್ಗ / 161
16
17
18
19