This page has been fully proofread once and needs a second look.

ಶಿಷ್ಯರನ್ನು ಗಂಗಾನದಿ ದಾಟಿಸಿದ್ದು : ತುರುಷ್ಕರಾಜನ ವಿಸ್ಮಯ
 

 
ವೈಷ್ಣವಾಗ್ರೇಸರರು ಆನಂದ ತೀರ್ಥರು
 

ಜ್ಞಾನ ಪ್ರಪೂರ್ಣರು ಶಿಷ್ಯರಿಗೆ ಅತಿ ಪ್ರಿಯರು

ಬಡಗ ದಿಕ್ಕಿನ ಕಡೆಗೆ ಮತ್ತೊಮ್ಮೆ ಪಯಣಿಸುತ

ಶಿಷ್ಯರಿಂದೊಡಗೂಡಿ ಗಂಗೆಯೆಡೆ ನಡೆದರು

ಶತ್ರುಭಯದಿಂದಾಗಿ ಅಂಬಿಗರ ಸುಳಿವಿಲ್ಲ

ಗಂಗೆಯನು ದಾಟಲು ನಾವೆಗಳೇ ಇಲ್ಲ
 
॥ ೮ ॥
 
ಪರಮ ಕರುಣಾಳುಗಳು ಆನಂದ ತೀರ್ಥರು

ಶಿಷ್ಯರಿಗೆ ಆಶ್ರಯವ ಮೂಲದಲಿ ನೀಡುವರು

ಇಂದವರು ಸಿಲುಕಿರುವ ಸಂದಿಗ್ಧವನು ಅರಿತು

ಎಲ್ಲರಿಗೂ ಅಭಯವನು ನೀಡಿ ಹುರಿದುಂಬಿಸಿ

ಸಂಸಾರ ಸಾಗರವ ದಾಟಿಹರೋ ಎಂಬಂತೆ

ಶಿಷ್ಯರೊಂದಿಗೆ ತುಂಬು ಗಂಗೆಯನ್ನು ಹಾಯ್ದರು
 
1
 
॥ ೯ ॥
 
ಕೂಗೊಂದು ಕೇಳಿಸಿತು "ತಡೆಯಿರಿ ! ತಡೆಯಿರಿ!

ತೀರ ಸೇರುವ ಮುನ್ನ ವೈರಿಗಳ ಕೊಲ್ಲಿರಿ'
"
ಅಲ್ಲಿದ್ದ ತ್ವರಕ ಭಟರಿಂತೆಂದು ಕೂಗುತ್ತ

ಹರಿಹಾಯ್ದು ಬಂದರು ಮಧ್ವಸಜ್ಜನರೆಡೆಗೆ

ತುರುಕ ಪುರುಷರ ಇಂಥ ಸೊಕ್ಕನ್ನು ಲೆಕ್ಕಿಸದೆ

ಅವರ ತಾಯ್ತುನುಡಿಯಲ್ಲೇ ಮಧ್ವರಿಂತೆಂದರು
 
॥ ೧೦ ॥
 
"ಮಂದಮತಿಗಳು ನೀವು ಶುದ್ಧ ಅವಿವೇಕಿಗಳು

ಹುಚ್ಚುತನದಲಿ ನೀವು ನೀರಿನಲ್ಲಿ ಕೊಚ್ಚದಿರಿ

ಹೆಚ್ಚು ಸಂಖ್ಯೆಯ ನಿಮಗೆ ನಮ್ಮಿಂದ ಭಯವೆ ?

ನಿಮ್ಮರಸನರಸಿಯೇ ನಾವು ಬಂದಿಹೆವಿಂದು

ಇಂತಿರಲು ನಮ್ಮೊಡನೆ ನಿಮಗೇಕೆ ಕಲಹ ? "

ಇಂತೆಂದು ತ್ವರಕರನು ಸಂಭ್ರಾಂತಿಗೊಳಿಸಿದರು
 
ಹತ್ತನೆಯ ಸರ್ಗ / 159
 
8
 
9
 
10
 
11
 
॥ ೧೧ ॥