This page has been fully proofread once and needs a second look.

ಅಗೆಯಲು ಹೇಳಿ ಅಗೆಯತೊಡಗಿದ ಈಶ್ವರದೇವ

 
"ಮಧ್ವಮುನಿಗಳು ಒಮ್ಮೆ ಪಯಣದ ಹಾದಿಯಲಿ

ಶಿವದೇವನೆಂಬೊಬ್ಬ ರಾಜನನು ಕಂಡರು

ಆ ರಾಜ ಪಥಿಕರಿಗೆ ಆದೇಶ ವೀಯುತ್ತ

ಈ ನೆಲವ ನೀವೆಲ್ಲ ಅಗೆಯಿರೆನ್ನುತಲಿದ್ದ "

ಮಧ್ವರಿಗೂ ಇಂತೆಯೇ ಆದೇಶವೀಯಲು

"ಅಗೆವ ಶೈಲಿಯನೊಮ್ಮೆ ತಿಳಿಸು ನೀನೆಂದರು"
 
॥ ೪ ॥
 
ದುರುಳ ಈಶ್ವರ ದೇವ ಮಧ್ವಮಹಿಮೆಯನರಿಯ

ಅವರೊಬ್ಬ ಸಾಮಾನ್ಯ ಮನುಜರೆಂದರಿತಾತ

ಅಗೆಯತೊಡಗಿದ ನೆಲವ ಶೂರತ್ವದಿಂದ

ರಾಜನ ದರ್ಪವನು ಇಳಿಸಲೋಸುಗ ಅವರು

ಮಹಿಮೆಯನು ತೋರಿದರು ರಾಜನಲ್ಲಿ

ಇದರಿಂದ ಅಗೆತವನವ ನಿಲ್ಲಿಸಲೇ ಇಲ್ಲ
 
॥ ೫ ॥
 
ಆನಂದ ತೀರ್ಥರು ವಾಯುದೇವರ ರೂಪ

ಸರ್ವ ಜೀವೋತ್ತಮರು, ಸಕಲ ದೋಷವಿಮುಕ್ತರು

ಸಕಲ ಚೇತನಕೆಲ್ಲ ಇವರು ಪ್ರೇರೇಪಕರು

ಬ್ರಹ್ಮಾದಿಗಳು ಸಕಲ ಚೇತನಕೆ ಒಡೆಯರು

ಇವರೊಳಗೆ ನೆಲೆಸಿರುವ ಲಕುಮಿಪತಿ ಮಾತ್ರ

ವಾಯುವಿನ ಪ್ರೇರಣೆಗೆ ನಿಲುಕದವನು
 
॥ ೬ ॥
 
ಯಮ ಶೇಷ ಭವರನ್ನು ಸ್ಮರಿಸುವ ಮಂದಿಗೆ

ಭವದೊಳಗೆ ಉದ್ಭವಿಪ ದುಃಖಾಬಿಬ್ಧಿಯೆಂಬುದು

ಕ್ಷಣದಲ್ಲಿ ಕಣ್ಮರೆ ಅವರ ಕೃಪೆಯಿಂದ

ಯಮ ಶೇಷ ಭವರಂಥ ಜಗದ ಪಾಲಕರೆಲ್ಲ

ವಾಯುದೇವರ ಸ್ತುತಿಸಿ, ಪಾಡಿ ನಲಿದಾಡುವರು

ಮಧ್ವಮುನಿ ಮಾರುತನ ಅವತಾರವಲ್ಲವೆ ?
 
158 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
5
 
7
 
॥ ೭ ॥