This page has not been fully proofread.

ಶ್ರೀ ಗುರುಭೋ ನಮ:
 
ಹತನೆಯ ಸರ್ಗ
 
ದ್ವಿತೀಯ ಬದರೀಯಾತ್ರೆಯಲ್ಲಿ ನಡೆದ ಮಹಿಮೆಗಳು
 
ಮಾಧವನ ಗುಣಗಳನ್ನು ಸಾಧಿಸುವ ಮಹಿಮ
ಪಾಪದ ಪಥಿಕರಿಗೆ ತಾಪವನು ನೀಡುವ
ಚೈತ್ರ ವೈಶಾಖದಲಿ ಕುಸುಮಗಳ ಸೃಜಿಸುವ
ಮಧ್ವಮುನಿಯೆಂಬುವ ಆ ಪ್ರಖರ ಸೂರ್ಯರು
ಭೈಗು ಕುಲೋತ್ತುಂಗರ ಆ ದಿವ್ಯ ಕ್ಷೇತ್ರದಲ್ಲಿ
ಸಕಲ ಸಂಭ್ರಮದಿಂದ ವಿಜೃಂಭಿಸಿದರು
 
ಆನಂದ ತೀರ್ಥರ ಶಿಷ್ಯರಲ್ಲೊಬ್ಬಾತ
ಆಸಕ್ತಿಯಲಿ ಕುಳಿತ ಶೋತೃನಿವಹವ ಕುರಿತು
ವಿವಿಧ ಸುವೃತ್ತಗಳು ವಿವಿಧ ಛಂದಗಳಿರುವ
ಖಂಡಕಾವ್ಯದಲ್ಲಿರುವ ನಾಯಕನ ಸ್ತುತಿಯಂತೆ
ಗುರುಮಧ್ವ ಸ್ತುತಿಯನ್ನು ಪಠಿಸತೊಡಗಿದನು
ಆನಂದ ತೀರ್ಥರ ಚರಿತೆಯನು ಪೊಗಳಿದನು
 
"ಮಧ್ವಮುನಿಗಳ ಚರಿತೆ ಉತ್ಕೃಷ್ಟ ಗೀತೆ
ಸಕಲ ಭುವನಗಳಲ್ಲಿ ಇದಕೆ ಸರಿಸಮನಿಲ್ಲ
ಸುರರ ಆಯುಷ್ಯದಲೂ ಮುಗಿಸಲಾಗದು ಅದನು
ಆದರೂ ಪ್ರೋತೃಗಳೆ ! ಕೇಳ ಬಯಸಿಹಿರಿ
ಅಷ್ಟಿಷ್ಟು ಅಲ್ಲಲ್ಲಿ ಹೇಳಿ ಮುಗಿಸುವೆನು
ಎಂದಿಗೂ ಮುಗಿಯದ ಮಧ್ವ ಚರಿತೆಯನು
 
1
 
2
 
3