This page has not been fully proofread.

ಸಂಭ್ರಮದಿ ಜರುಗಿತು, ವಾಸುದೇವರ ಯಜ್ಞ
ನೂರಾರು ಹವ್ಯಕರು, ಹಲವಾರು ಋತ್ವಿಕರು
ಆನಂದ ತೀರ್ಥರ ಅನುಜರೇ ಹೋತೃಗಳು
ಅನುವಾಕ್ಯ ಯಾಜ್ಞೆಗಳು, ಪ್ರವರ್ಗ ಅಭಿಷ್ಟವಗಳು
ಎಲ್ಲವೂ ಮೇಳವಿಸಿ ವಿಜೃಂಭಿಸಿತ್ತು
ಸುರರೆಲ್ಲ ಇದ ಕಂಡು ಮುದವ ತಾಳಿದರು
 
ಮಧ್ವರ ಅನುಜರು ಅತಿಶಯದ ಪರಿಣತರು
ವೀರಶ್ರೇಷ್ಠನ ತರದಿ ವೈಶ್ವದೇವರ ಕರೆದು
ಹಲವಾರು ಮಂತ್ರಗಳ, ಶಸ್ತ್ರಗಳ ಬಳಸಿ
ಯಜ್ಞಕ್ಕೆ ವಿಘ್ನವನು ತರುವ ಅಸುರರ ತಡೆದು
ಸುರಗಣಕೆ ನೀಡಿದರು ಹವಿರ್ಭಾಗವನ್ನು
ವಾಸುದೇವರ ಯಜ್ಞ ಸಾಫಲ್ಯ ಪಡೆಯಿತು
 
ದೇವತೆಗಳೆಲ್ಲರಲಿ ವಾಯುದೇವರೆ ಶ್ರೇಷ್ಠ
ಸೋಮರಸಪಾನವನು ಮೂರು ಸಲ ಮಾಳವರು
 
ಆನಂದತೀರ್ಥರು ವಾಯುವಿನ ಅವತಾರ
ಅಂತಹ ಮಹನೀಯ ಪ್ರಕೃತಿಗಳು
ಮಹಾಕ್ರತುವೆಂಬುವ ಯಜ್ಞನೇತಾರರು
ಇಂತಿರಲು ಆ ಯಜ್ಞ ಬಣ್ಣನೆಗೆ ನಿಲುಕುವುದೆ ?
 
ಬ್ರಹ್ಮನ ಜ್ಞಾನವನ್ನು ಅರಸಿ ಹೊರಟವರಿಗೆ
ಕರ್ಮವೇ ಸಾಧನವು ಅದರ ಸಂಪಾದನೆಗೆ
ಬ್ರಹ್ಮ ಜ್ಞಾನದ ಬಗ್ಗೆ ಅಧಿಕಾರ ಉಳ್ಳವಗೆ
ಅರಿವನ್ನು ಮೂಡಿಸಲು ಮಧ್ವಮುನಿ ಜನಿಸಿದರು
ಯಜ್ಞಾದಿ ಕರ್ಮಗಳೂ ಪರಮಾತ್ಮ ವಿಷಯವೇ
ಅದರಿಂದಲೇ ಅವರು ಇವುಗಳ ತೊಡಗಿದರು
 
ಒಂಬತ್ತನೆಯ ಸರ್ಗ / 153
 
48
 
49
 
50
 
51