This page has been fully proofread once and needs a second look.

ಜರಾಘಟಿತನ ಪರಾಭವ
 

 
ಜರಾಘಟಿತ ಗೋತ್ರದ ದುರ್ಜನನು ಒಬ್ಬ

ಮೊರಡಿಕಾಯನೆಂಬುವುದು ಮತ್ತೊಂದು ಹೆಸರವಗೆ

ದುರುಳರಲಿ ದುರುಳನು; ಎಲ್ಲರನೂ ಕೆಣಕುವನು

ದೇವತಾ ವರದಾನ ಪಡೆದವನು ಆವನು
 
॥ ೪೪ ॥
ಪ್ರತಿಭೆಯ ಪ್ರಭೆಯನ್ನು ಹೊಂದಿದ್ದನವನು

ಪ್ರಬಲರೆಲ್ಲರೂ ಅವನ ವಶದಲ್ಲಿ ಇದ್ದವರು
 

 
ಗುರುಪುತ್ರನಿಂದ ಅಪೂರ್ವ ಯಜ್ಞ
 

 
ಪ್ರಾಬಲ್ಯ ಮದದಿಂದ ಬೀಗುತ್ತಲಿದ್ದವನು

ಇಷ್ಟದೈವವು ತನಗೆ ಒಲಿದಿರುವುದೆಂದು

ಯಜ್ಞಯಾಗಾದಿಯಲಿ ಹಿರಿಮೆ ತನದೆಂದು

ಬೇರಾರಿಗೂ ಇದರ ಅರ್ಹತೆಯು ಇಲ್ಲವೆಂದು

ಇಂತೆಂದು ಹಲವಾರು ದುರ್ಯುಕ್ತಿಯಿಂದ
 

ಆ ಘಾತುಕನು ಜನತೆಯಲ್ಲಿ ಕಿರುಕುಳವ ಮೂಡಿಸಿದ
 
॥ ೪೫ ॥
 
ಹೀಗಿರಲು, ಒಂದು ದಿನ ಆ ದುರುಳ ಮನುಜನು
 

ಆನಂದ ತೀರ್ಥರಿಗೆ ಅತ್ಯಂತ ಪ್ರಿಯರಾದ

ಪರಮಾಪ್ತ ಗುರುಪುತ್ರ ವಾಸುದೇವಾಚಾರ್ಯರಿಗೆ

ಹವನ ಹೋಮಾದಿಗಳಲಡ್ಡಿ ತಂದೊಡ್ಡಿದನು

ಆ ದುಷ್ಟನನು ನಿಗ್ರಹಿಸಿ ಶಿಷ್ಟರನು ರಕ್ಷಿಸಲು

ಆನಂದ ತೀರ್ಥರು ಸನ್ನದ್ಧರಾದರು
 

 
ಈ ಹಿಂದೆ ದ್ವಾಪರದಿ ಭೀಮಸೇನನು ಹೇಗೆ

ಧರ್ಮಸೂನುವಿನಿಂದ ಯಜ್ಞವನ್ನು ಮಾಡಿಸಿದ

ಅದರಂತೆ ಕಲಿಯುಗದಿ ಮಧ್ವಮುನಿ ನೆರವಿಂದ

ವಾಸುದೇವನ ಯಜ್ಞ ನಿರ್ವಿಘ್ನವಾಯ್ತು

ಮಧ್ವಮುನಿಗಳ ಕೀರ್ತಿ ಮುಗಿಲನ್ನು ಮುಟ್ಟಿತು
 

ಅಡಿಗಡಿಗೆ ಜನರವರ ಅಡಿಗಳಿಗೆ ನಮಿಸಿದರು
 
152 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47
 
॥ ೪೭ ॥