This page has not been fully proofread.

ಈ ಪರಿಯೊಳಾ ಪೂಜ್ಯ ಆನಂದ ತೀರ್ಥರು
ರೂಪ್ಯ ಪೀಠಾಪುರದಿ ವಾಸಿಸಲು ತೊಡಗಿದರು
ಯಾವ ಬಗೆ ಆಶ್ರಯವೂ ಇಲ್ಲದ ಸಜ್ಜನಕೆ
 
ಮುಕುತಿ ಮಾರ್ಗಕೆ ದಾರಿ ತೋರಬೇಕೆಂದೆನಿಸಿ
 
ಏನಾದರೂ ಸತ್ಯತಿಯ ಮಾಡಲೆಳಸಿದರು.
ನಿರ್ವ್ಯಾಜ ಪ್ರೇಮವನು ಜನಕೆ ತೋರಿದರು
 
ಉಡುಪಿಯಲ್ಲಿ ಶ್ರೀ ಕೃಷ್ಣ ಪ್ರತಿಷ್ಠೆ
 
ಗೋಪಿಕಾಸ್ತ್ರೀಯರ ಚಿತ್ರದೊಲ್ಲಭನಾದ
ಶ್ರೀ ಲಕುಮಿಪತಿಯಾದ ಶ್ರೀ ಕೃಷ್ಣ ಪ್ರತಿಮೆಯನು
ಪರಿಶುದ್ಧ ಜಲದಿಂದ ತುಂಬಿ ತುಳುಕುತ್ತಿದ್ದ
ಮಧ್ವಮುನಿ ನಾಮದ ಕಲ್ಯಾಣಿಯಲ್ಲಿ
ಮೂಾಲ್ಕು ಶಿಷ್ಯರ ನೆರವಿನಲಿ ತೊಳೆದು
ಅಭಿಷೇಕ ಮಾಡಿದರು ಆ ಸರೋವರದಿ
 
ಆ ಪ್ರತಿಮೆಯೇನು ಸಾಮಾನ್ಯವಲ್ಲ
ಮೂವತ್ತು ಬಲಶಾಲಿ ಜನರದನು ಹೊರರು
ಇಂತಹ ಪ್ರತಿಮೆಯನು ಪೂಜ್ಯ ಆಚಾರ್ಯರು
ಸುಲಭದಲಿ ಎತ್ತುತ್ತ ಮಠಕೆ ಕೊಂಡೊಯ್ದರು
ಶ್ರೀ ಹರಿಯ ಸಾನ್ನಿಧ್ಯ ಪ್ರತಿಮೆಯೊಳಗಿತ್ತು
ಆಚಾರ್ಯ ಸ್ಪರ್ಶವದ ಪಾವನವ ಮಾಡಿತ್ತು.
 
ನಂದನಂದನನಾದ ಆ ಕೃಷ್ಣಮೂರ್ತಿ
ಮೃದು ಮಂದಹಾಸದ ಸುಂದರಾನನ ಮೂರ್ತಿ
ಪ್ರಾಕೃತದ ಇಂದ್ರಿಯಕೆ ಗೋಚರಿಸನವನು
ರಮಣೀಯ ಸುಂದರನು, ಬ್ರಹ್ಮಾಂಡ ಪೂಜಿತನು
ಆ ದಿವ್ಯ ಮೂರ್ತಿಯನ್ನು ಆನಂದ ತೀರ್ಥರು
ವಿಹಿತದಲ್ಲಿ ಪ್ರತಿಮೆಯಲ್ಲಿ ಸನ್ನಿಹಿತಗೊಳಿಸಿದರು
 
ಒಂಬತ್ತನೆಯ ಸರ್ಗ / 151
 
40
 
41
 
42
 
43