This page has been fully proofread once and needs a second look.

ಅಚ್ಯುತ ಪ್ರೇಕ್ಷರ ಅಚ್ಚು ಮೆಚ್ಚಿನ ಶಿಷ್ಯ

ಆನಂದ ತೀರ್ಥರ ಶಾಸ್ತ್ರರಸ ತೀರ್ಥವನ್ನು

ಆಸ್ವಾದಿಸುತ ನಲಿದ ಗುರುವ ಪರಿಶುಭ್ರ ಮನ

ಅಕಲಂಕ ಚಂದ್ರಮನ ಮಂಡಲದ ಪರಿಯಲ್ಲಿ

ಅರಳಿರುವ ತಾವರೆಯ ಹೂವಿನ ಪರಿಯಲ್ಲಿ
 

ಶೋಭಿಸಿತು ಶಾರದನ ವಾರಿಧಿಯ ಜಲದಂತೆ
 
॥ ೩೬ ॥
 
ಮನದಾಳದಲ್ಲಿಳಿದ ಅದೈದ್ವೈತ ಸಿದ್ಧಾಂತ

ಅಚ್ಯುತ ಪ್ರೇಕ್ಷರನು ಅಚಲರಾಗಿರಿಸಿತ್ತು

ಬಾಯಾರಿದವನೊಬ್ಬ ಉಪ್ಪು ನೀರನು ಕುಡಿದು

ಬಳಿಕ ಸಿಹಿನೀರನ್ನು ಕುಡಿದು ನಲಿಯುವ ಹಾಗೆ

ಮಧ್ವ ಶಾಸ್ತ್ರದ ಶ್ರವಣ ಆ ಗುರುವ ಮನದಲ್ಲಿ

ಆಪ್ಯಾಯಕರವಾದ ಆನಂದ ತಂದಿತು
 
॥ ೩೭ ॥
 
ನಂತರದ ಕಥೆಯಂತೂ ತುಂಬ ಸ್ವಾ
 
ಸ್ವಾರಸ್ಯ
 

ಅಚ್ಯುತ ಪ್ರೇಕ್ಷರೂ ಜೇಷ್ಠಯತಿಗಳೂ ಕೂಡಿ

ಮಧ್ವ ಮುನಿಯೆಂಬುವ ವಿಷ್ಣು ಪದವಾಶ್ರಯಿಸಿ

ಮಧ್ವಶಾಸ್ತ್ರದ ತಿರುಳ ಎಲ್ಲೆಲ್ಲೂ ಹರಡಿ

ಬಾನಿನಲಿ ರವಿ ಚಂದ್ರ ಕೂಡಿ ಬೆಳಗುವ ಹಾಗೆ

ನೀಗಿದರು ಜನಮನದಿ ಕವಿದ ಕತ್ತಲೆಯ
 
॥ ೩೮ ॥
 
ಮಧ್ವಮತ ಪಾಲಿಸಲು ಯೋಗ್ಯತೆಯು ಬೇಕು

ದುಷ್ಟ, ದುರ್ಜನಕೆಲ್ಲ ಮಧ್ವಮತ ಸಲ್ಲ

ಮಧ್ವಾನುಯಾಯಿಗಳ ಕುರುಹುಗಳು ಏನು ?

ತಪ್ತ ಮುದ್ರೆಯ ಧರಿಸಿ ಬೀಗುವನೇ ಮಾಧ್ವ

ಸಕಲ ದುರಿತವ ಕಳೆವ ಶಂಖ ಚಕ್ರಾಂಕಿತವ

ಮಧ್ವಮುನಿ ನೀಡಿದರು ತಮ್ಮೆಲ್ಲ ಶಿಷ್ಯರಿಗೆ
 
150 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
॥ ೩೯ ॥