This page has not been fully proofread.

ಮಧ್ವಮುನಿ ಎಂಬುವ ಸಾಗರದ ನೆಲೆಯಲ್ಲಿ
ಬ್ರಹ್ಮಸೂತ್ರದ ಭಾಷ್ಯ ಅಮೃತದ ಜಲದಂತೆ
ಜೇಷ್ಠಯತಿಯೆಂಬುವ ಮುಗಿಲೊಂದು ಬಂದು
ಈ ಜಲವ ತನ್ನೊಳಗೆ ಸಾಂದ್ರವಾಗಿಸಿಕೊಂಡು
ಶಿಷ್ಯಜನರೆಂಬುವ ಧರೆಗೆ ಉಣಿಸಿದರು
ಮುಗಿಲಿನ ಜಲನಿಧಿಯು ಮತ್ತಷ್ಟು ಮಿಗಿಲಾಯ್ತು
 
ಅಚ್ಯುತಪ್ರೇಕ್ಷರು ಶ್ರೇಷ್ಠ ಸುವಿಚಾರಿಗಳು
ಕಲಿಕಾಲ ಬಲದಿಂದ ಅದೈತಿಯಾದವರು
ಆನಂದ ತೀರ್ಥರು ಅನುನೀತಿ ರಥರು
ಸುವಿಚಾರಧಾರೆ, ವಿನಯೋಕ್ತಿಯಿಂದ
ಶಾಸ್ತ್ರ ಸಮ್ಮತವಾದ ತರ್ಕ ಚತುರತೆಯಿಂದ
ಸೂತ್ರಭಾಷ್ಯದ ಹಿರಿಮೆ ಗುರುಗಳಿಗೆ ಹೇಳಿದರು
 
ಅಚ್ಯುತ ಪ್ರೇಕ್ಷರು ಅಚಲ ಸಿದ್ಧಾಂತಿಗಳು
ಅದೈತ ಬಿಳಲುಗಳಲಿ ಬಂಧವಾಗಿದ್ದವರು
ಆನಂದ ತೀರ್ಥರು ಗೊಂದಲವ ನೀಗುತ್ತ
ಸೂತ್ರಗಳ ಅರ್ಥವನ್ನು ವಿವರದಲಿ ಹೇಳುತ್ತ
ರೋಗಿಗಳ ವ್ಯಾಧಿಯನ್ನು ವೈದ್ಯ ಗುರುತಿಸುವಂತೆ
 
ಗುರುಮನದ ಸಂಶಯವ ಕೀಳ ತೊಡಗಿದರು
 
ಮಾನಸ ಸರೋವರದಿ ಕಾಗೆ ಕುಳಿತಾಗ
 
ಅದನು ಓಡಿಸಲೊಂದು ಹಂಸಪಕ್ಷಿಯು ಬಂದು
ರೆಕ್ಕೆಗಳನಪ್ಪಳಿಸಿ ಭೀಕರದಿ ಚೀತ್ಕರಿಸಿ
ಅಂಜಿದಾ ಕಾಗೆಯನು ಓಡಿಸುವ ಪರಿಯಲ್ಲಿ
ಮಧ್ವಮುನಿಗಳು ತಮ್ಮ ಬುದ್ಧಿ ಸಾಮರ್ಥ್ಯದಲ್ಲಿ
ಗುರುಮನದ ಕಲ್ಮಷವ ಕಿತ್ತೆಸೆದರು
 
ಒಂಬತ್ತನೆಯ ಸರ್ಗ / 149
 
32
 
33
 
34
 
35