This page has been fully proofread once and needs a second look.

ಜುಳು ಜುಳು ಹರಿಯುವ ನದಿಯ ನೀರಿನ ತೆರದಿ

ಮಧ್ವಮುನಿಗಳ ವಾಣಿ ತಡೆಯಿರದೆ ಹರಿದಿತ್ತು

ನಿಮ್ಮ ಪಾತ್ರದ ಭೂಮಿ ನೀರುಂಡು ತಣಿವಂತೆ

ಸಜ್ಜನರ ಮನವೆಲ್ಲ ತಂಪಾಗಿ ತಣಿದಿತ್ತು

ದುರ್ಜನರ ಮನವೆಲ್ಲ ಬರಡಾಗಿ ಉಳಿದಿತ್ತು

ತುಂಗ ಪ್ರದೇಶಕ್ಕೆ ನೀರೆಂತು ಹರಿವುದು ?
 
॥ ೨೮ ॥
 
ರಜತ ಪೀಠಕ್ಕೆ ಪುನರಾಗಮನ
 

 
ಪರಿಪರಿಯ ಕೌತುಕವ ದಾರಿಯಲ್ಲಿ ತೋರಿ
 

ವಿಧವಿಧದ ಜನರಿಂದ ಸನ್ಮಾನ ಸ್ವೀಕರಿಸಿ

ಮರಳಿದರು ಮಧ್ವಮುನಿ ರಾಜತಾಸನ ಪುರಕೆ

ರಜತಗಿರಿಯಿಂದವರು ರಜತಪುರಿ ಸೇರಿದರು

ಅನಂತಾಸನನನ್ನು ಅತಿಯಾಗಿ ಸ್ತುತಿಸಿದರು

ಶ್ರೀ ಹರಿಯ ಕೃಪೆಯನ್ನು ಸಂಭ್ರಮದಿ ಪಡೆದರು
 
॥ ೨೯ ॥
 
ಅಚ್ಯುತ ಪ್ರೇಕ್ಷರಿಗೆ ಆದ ಆನಂದ
 

 
ಅಚ್ಯುತ ಪ್ರಿಯರಾದ ಆನಂದ ತೀರ್ಥರು

ಅಚ್ಯುತ ಪ್ರೇಕ್ಷರಿಗೆ ಸಾಷ್ಟಾಂಗ ನಮಿಸಿದರು

ಹಲವಾರು ದಿನದಿಂದ ಶಿಷ್ಯನನ್ನು ಕಾಣದಲೆ

ಪರಿತಪಿಸಿ ಕಂಗೆಟ್ಟ ಗುರುವರೇಣ್ಯರಿಗೆ

ಶಿಷ್ಯನನು ಕಾಣುತಲೆ ಆನಂದವತಿಯಾಯ್ತು

ಆತನನು ಸ್ವಾಗತಿಸಿ ಹರುಷಗೊಂಡರು ಅವರು
 
a
 
॥ ೩೦ ॥
 
ಬ್ರಹ್ಮ ಸೂತ್ರಕೆ ಬರೆದ ಆಚಾರ್ಯ ಭಾಷ್ಯ

ಈ ಮುನ್ನವೇ ಗುರುವ ಕೈಯ ಸೇರಿತ್ತು

ಅದನೋದಿ ಗುರುವರ್ಯ ಪುಳಕಗೊಂಡಿದ್ದರು

ಸಾಕ್ಷಾತ್ತು ಶಿಷ್ಯನನು ಇಂದು ನೋಡಿದ ಬಳಿಕ

ಗುರುವಿನ ಸಂತಸವು ನೂರುಮಡಿಯಾಯ್ತು

ಗುರು-ಶಿಷ್ಯ ಮಿಲನವು ಸಂಭ್ರಮದಿ ಕೂಡಿತ್ತು
 
148 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
3
 
॥ ೩೧ ॥