This page has not been fully proofread.

ನರದೇವ ಸೋದರನು ನಾರಾಯಣ
 
ಪರಮೋಚ್ಚ ವಿಕ್ರಮನು, ಪರಮಾರ್ಥ ಸಾಧಕನು
ಸಜ್ಜನರ ಸಂತಸಕ ಎಂದೆಂದೂ ಭಾಜನನು
"ಹರಿ " ಎಂಬ ಹೆಸರಿಂದ ಯಮಪುತ್ರನಾದನು
 
11
 
"ಕೃಷ್ಣ" ಎಂಬುವ ಮತ್ತಿನ್ನೊಂದು ಹೆಸರಿಂದ
ಹರಿಯ ಆ ರೂಪಕ್ಕೆ ಅನುಜನೆಂದೆನಿಸಿದನು
 
'ಹಾವತಾರನಿಗೆ ಅಭಿವಂದನೆ, ನಿನಗೆ ಅಭಿನಂದನೆ
 
ನಾರಾಯಣಾದಿಗಳ ನೂರು ಸ್ವರೂಪನಿಗೆ
ವಿಶ್ವಾದಿ ಸಾವಿರಕ್ಕೂ ಮಿಗಿಲಾದ ರೂಪನಿಗೆ
ಅವಿಕಾರಿ ರೂಪನಿಗೆ, ಅಂತ್ಯವಿರದವನಿಗೆ
ಸಕಲ ಚಿತ್ಸುಖನಿಗೆ, ವಂದನೆಯು ನಿನಗೆ
ವಂದನೆಯು, ವಂದನೆಯು, ವಂದನೆಯು ನಿನಗೆ?"
 
ನಾರಾಯಣ ದರ್ಶನ - ಭಾಷ್ಯ ರಚನೆಗೆ ಆಜ್ಞಾಸ್ವೀಕಾರ
 
ಇಂತೆಂದು ಭಜಿಸುತ್ತಶ್ರೀಮದಾಚಾರ್ಯರು
ನಮಿಸಿದರು ಭಕುತಿಯಲ್ಲಿ ಪರಮಾತ್ಮಗೆ
ದೇವ ದೇವೋತ್ತಮನ ಆದರವ ಪಡೆದರು
ವ್ಯಾಸ ನಾರಾಯಣರ ದ್ವಂದ್ವ ರೂಪಗಳೆರಡು
ಪರಸ್ಪರರ ಆದರಿಸಿ ಆಸೀನರಾಗಲು
ಮಧ್ವಮುನಿ ಕುಳಿತರು ನಂತರದಿ ನಮಿಸಿ
 
ಸರಸ ಸಂಭಾಷಣೆ, ಸಲ್ಲಾಪ, ಮುಂತಾದ
ಪರಿಪರಿಯ ಸನ್ನಡತೆ, ಶಿಷ್ಟನುಡಿಗಳಿಂದ
ಲೋಕಪತಿ ಆಗಿರುವ ಆ ನಮ್ಮ ನಾರಾಯಣ
 
ವ್ಯಾಸದೇವರ ಭವ್ಯ ಆನನವ ವೀಕ್ಷಿಸುತ
ಭಕ್ತಿ, ನಮ್ರತೆಗಳೇ ಮೈವೆತ್ತ ಮಧ್ವರನು
 
ಕಂಡು ಏಕಾಂತದಲ್ಲಿ ಇಂತೆಂದು ನುಡಿದನು
 
ಎಂಟನೆಯ ಸರ್ಗ / 135
 
40
 
41
 
42
 
43