This page has been fully proofread once and needs a second look.

ಕರ್ದಮ ಪ್ರಜಾಪತಿಯ ಪಿತೃತ್ವದಿಂದ

ಸ್ವಾಯಂಭೂ ಮನುವಿನ ಪುತ್ರಿಯ ಗರ್ಭದಲ್ಲಿ
ಲಿ
ಪರಮಾತ್ಮ ಜನಿಸಿದನು ಮತ್ತೊಮ್ಮೆ ಧರೆಯಲ್ಲಿ

ತನ್ನಲ್ಲಿ ಅತಿಶಯದ ಭಕ್ತಿಯನ್ನು ತೋರಿದ್ದ

ದೇವತೆಗಳೆಲ್ಲರಿಗೆ ಸಚ್ಛಾಸ್ತ್ರ ಬೋಧಿಸುತ

ಅವರಿಂದ ಪಡೆದನು ಅಪರಿಮಿತ ಭಕ್ತಿಯನ್ನು
 
ನು ॥ ೩೬ ॥
 
ತುಂಬು ತಾರುಣ್ಯದ ವೈಭವದ ಲಾಂಛನ

ಹಾಲ ಕಲಶಗಳಂತೆ ಆ ಬೃಹತ್ತ್ಸನಗಳು

ರಮಣೀಯ ರಮಣಿಯ ವೇಷವನ್ನು ಹೊತ್ತು
 

ವರವಿಲಾಸಿನಿಯಂತೆ ಮಂದಹಾಸವ ಬಿತ್ತು

ಅಮೃತದ ಕಲಶವನು ಅಸುರರಿಂದಲಿ ಕಿತ್ತು

ಪರಮಾತ್ಮ ಉಣಿಸಿದನು ಸುರರಿಗಾ ಸುಧೆಯ
 
॥ ೩೭ ॥
 
ಸುಜನರಾ ಮನವನ್ನು ಪರಿಶುದ್ಧಗೊಳಿಸುವನು
ಪುವನು
ಸರ್ವದಾ ಪರಿಶುದ್ಧ ಸರ್ವಕಾಲದೊಳಿರುವ

ಮುನಿಕುಲೋತ್ತಮರಾದ ಅತ್ರಿಯ ಪತ್ನಿ

ಅನಸೂಯ ಗರ್ಭದಲ್ಲಿ ಜನ್ಮತಾಳಿದನವನು
`

ಸುಕುಮಾರ ರೂಪದಲಿ, ದತ್ತ'"ದತ್ತ" ನಾಮದಲಿ

ಎಂತು ಬಣ್ಣಿಸಲಹುದು ಅವನ ಲೀಲೆಗಳ ?
 
॥ ೩೮ ॥
 
ಸಜ್ಜನರಿಗತಿಪ್ರಿಯನು ನಾರಾಯಣ

ಪರತತ್ವ ಈಪ್ಪಿಸಿತ ಸನಕಾದಿ ವಂದಿತ

ಪರಮ ಪಾವನವಾದ ಸಿದ್ಧಾಂತ ಶೋಭಿತ
 

ಋಷಭ ನಾಮಕ ರಾಜ ರೂಪವನ್ನು ಧರಿಸಿ

ಪರಮ ಹಂಸರ ಶ್ರೇಷ್ಠ ಆಶ್ರಮವ ಸ್ವೀಕರಿಸಿ

ವಿಹರಿಸಿದ ಭಗವಂತ ಈ ಧರೆಯಲಿ
 
134 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
3
 
॥ ೩೯ ॥