This page has not been fully proofread.

ಕರ್ದಮ ಪ್ರಜಾಪತಿಯ ಪಿತೃತ್ವದಿಂದ
ಸ್ವಾಯಂಭೂ ಮನುವಿನ ಪುತ್ರಿಯ ಗರ್ಭದಲ್ಲಿ
ಪರಮಾತ್ಮ ಜನಿಸಿದನು ಮತ್ತೊಮ್ಮೆ ಧರೆಯಲ್ಲಿ
ತನ್ನಲ್ಲಿ ಅತಿಶಯದ ಭಕ್ತಿಯನ್ನು ತೋರಿದ್ದ
ದೇವತೆಗಳೆಲ್ಲರಿಗೆ ಸಚ್ಛಾಸ್ತ್ರ ಬೋಧಿಸುತ
ಅವರಿಂದ ಪಡೆದನು ಅಪರಿಮಿತ ಭಕ್ತಿಯನ್ನು
 
ತುಂಬು ತಾರುಣ್ಯದ ವೈಭವದ ಲಾಂಛನ
ಹಾಲ ಕಲಶಗಳಂತೆ ಆ ಬೃಹತ್ಪನಗಳು
ರಮಣೀಯ ರಮಣಿಯ ವೇಷವನ್ನು ಹೊತ್ತು
 
ವರವಿಲಾಸಿನಿಯಂತೆ ಮಂದಹಾಸವ ಬಿತ್ತು
ಅಮೃತದ ಕಲಶವನು ಅಸುರರಿಂದಲಿ ಕಿತ್ತು
ಪರಮಾತ್ಮ ಉಣಿಸಿದನು ಸುರರಿಗಾ ಸುಧೆಯ
 
ಸುಜನರಾ ಮನವನ್ನು ಪರಿಶುದ್ಧಗೊಳಿಸುವನು
ಸರ್ವದಾ ಪರಿಶುದ್ಧ ಸರ್ವಕಾಲದೊಳಿರುವ
ಮುನಿಕುಲೋತ್ತಮರಾದ ಅತ್ರಿಯ ಪತ್ನಿ
ಅನಸೂಯ ಗರ್ಭದಲ್ಲಿ ಜನ್ಮತಾಳಿದನವನು
`ಸುಕುಮಾರ ರೂಪದಲಿ, ದತ್ತ' ನಾಮದಲಿ
ಎಂತು ಬಣ್ಣಿಸಲಹುದು ಅವನ ಲೀಲೆಗಳ ?
 
ಸಜ್ಜನರಿಗತಿಪ್ರಿಯನು ನಾರಾಯಣ
ಪರತತ್ವ ಈಪ್ಪಿತ ಸನಕಾದಿ ವಂದಿತ
ಪರಮ ಪಾವನವಾದ ಸಿದ್ಧಾಂತ ಶೋಭಿತ
 
ಋಷಭ ನಾಮಕ ರಾಜ ರೂಪವನ್ನು ಧರಿಸಿ
ಪರಮ ಹಂಸರ ಶ್ರೇಷ್ಠ ಆಶ್ರಮವ ಸ್ವೀಕರಿಸಿ
ವಿಹರಿಸಿದ ಭಗವಂತ ಈ ಧರೆಯಲಿ
 
134 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
3