This page has not been fully proofread.

ಪರಮಾತ್ಮ ಕ್ರಮಿಸಿದನು ದುರ್ಗಮದ ಹಾದಿಯನು
ಏರಿದನು ಹಲವಾರು ಉತ್ತುಂಗ ಶಿಖರವನ್ನು
ಆ ನಿಬಿಡ ಕಾನನದಿ ಹಲವಾರು ದುರ್ಜನರು!
ಖರ ದೂಷಣರ ಪರಿಯ ಖಳ ರಕ್ಕಸರು !
ಸುಜನರಿಗೆ ಪರಿಪರಿಯ ವ್ಯಾಕುಲವ ಕೊಡುವವರ
ಭಗವಂತ ನೂಕಿದನು ಘೋರ ನರಕದೊಳು
 
ಪ್ರಮಾದ, ಮದದಿಂದ ತುಂಬಿರುವ ದಾನವರ
ಸುರಪತಿಯ ಶತ್ರುಗಳ ಅಪರಿಮಿತ ಗಡಣವನು
ಪರಮಾತ್ಮ ಕ್ಷಣದಲ್ಲಿ ನಿಗ್ರಹಿಸಿ ಬೆಳಗಿದನು
ರುಚಿರಾಶ್ರಮಾಂಗಣವ ತೇಜದಲಿ ಬೆಳಗಿಸುತ
ಲೋಕವಂದಿತಳಾದ ಲೋಕಮಾತೆಯ ಸಹಿತ
 
ಭಗವಂತ ಬೆಳಗಿದನು ಪ್ರಖರ ಕಾಂತಿಯಲಿ
 
L
 
ತನ್ನ ಪ್ರಿಯತಮೆಯಾದ ಶ್ರೀ ಮಹಾಲಕುಮಿಯನು
ಆಪಹರಿಸಿ ಅತಿಯಾದ ವ್ಯಾಕುಲವ ನೀಡಿದ್ದ
ನರದೇವ ಮಂಡಲವ, ಅಷ್ಟ ದಿಕ್ಷಾಲಕರ
 
ಸುಲಭದಲಿ ನಿಗ್ರಹಿಸಿ ಆ ನಮ್ಮ ಭಗವಂತ
ದುಷ್ಟದಾನವನಾದ ಹತ್ತು ತಲೆಯವನನ್ನು
 
ಕಂಡು ಕಾಣದ ರೀತಿ ತಾತಾರ ಮಾಡಿದನು
 
ಪವನನಂದನನಿಂದ ಅಭಿವಂಧಿತನು ಹರಿಯು
ಇಂದ್ರಸುತ ವಾಲಿಯನು ಶರದಿಂದ ಸಂಹರಿಸಿ
ಹರಿಸೂನುವಿಗೆ ಪರಮ ಕರುಣೆಯನು ತೋರಿದನು
 
ನಿಜರಾಜ್ಯ ಸಂಪದವ ಆತನಿಗೆ ನೀಡಿ
ಜ್ಞಾನ ಸಾಮ್ರಾಜ್ಯದ ದಾನವನು ಮಾಡಿ
ಪರಮಾತ್ಮ ತೋರಿದನು ಕರುಣಾ ಕಟಾಕ್ಷ
 
132 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
28
 
29
 
30
 
3: