This page has been fully proofread once and needs a second look.

ಅನುಜನ ಜೊತೆಗೂಡಿ ಪರಮಾತ್ಮನಾಗ

ಮರಳಿದನು ಮತ್ತೊಮ್ಮೆ ಮಧುರ ಪುರಿಗೆ

ಜನಕನಿಗೆ ಒಲವನ್ನು ತಂದಿತ್ತ ನಗರಿಗೆ

ಜಗದೇಕ ಸುಂದರನು ನಮ್ಮ ಪರಮಾತ್ಮ

ಸ್ತ್ರೀಪುರುಷರೆನ್ನದೆಲೆ ಎಲ್ಲರ ಕಂಗಳಿಗೆ

ಹಬ್ಬವಾಯಿತು ಇಂಥ ಸ್ಮರಣೀಯ ದೃಶ್ಯ
 
॥ ೨೪ ॥
 
ನಂತರದಿ ಲೀಲೆಯನ್ನು ತೋರುತ್ತ ಪರಮಾತ್ಮ

ಶಿವನ ಆ ಧನುವನ್ನು ಸುಲಭದಲ್ಲಿ ಖಂಡಿಸಿದ

ಉಗ್ರಸೇನಾ ಬಲವ ಹೆಮ್ಮೆಯಲ್ಲಿ ಹೊಂದಿದ್ದ

ರಾಜ ಕುವರರ ಗರ್ವ ಕ್ಷಣದಲ್ಲಿ ಭಂಗಿಸಿದ

ಬ್ರಹ್ಮಪಿತ ಪರಮಾತ್ಮ ವಿಪ್ರಗುರುವನ್ನು ತಣಿಸಿ

ಮುದವಿತ್ತ ಭಕ್ತರಿಗೆ ಮಹಿಮೆಯನು ಉಣಿಸಿ
 
॥ ೨೫ ॥
 
ಪದ್ಮಪತ್ರದ ತೆರದಿ ನೇತ್ರಗಳ ಪಡೆದಿದ್ದು

ರಾಜಕುವರಿಯ ಹಾಗೆ ಧರಣಿಯಲ್ಲಿ ಜನಿಸಿರ್ದ
 

ಲಕುಮಿಯನು ವರಿಸಿದನು ನಮ್ಮ ಶ್ರೀ ಹರಿಯು

ಸಹಜ ಲೀಲೆಗಳಿಂದ ಕ್ಷಾತ್ರವೈರಿಯ ಗೆಲಿದು

ಕಡಲಿನಾ ಪರಿಯಲ್ಲಿ ದುರ್ಗಮವು ಎನಿಸಿದ್ದ

ಪುರವ ಹೊಕ್ಕನು ನಮ್ಮ ಪರಮಾತ್ಮ ಮುದದಿ
 
॥ ೨೬ ॥
 
ಜನನಿಯನು ಸಂತುಷ್ಟಗೊಳಿಸುವ ಸಲುವಾಗಿ

ಪತ್ನಿಯಿಂದೊಡಗೂಡಿ, ಅನುಜನೊಂದಿಗೆ ಕೂಡಿ

ವೈರಿಗಳನೆದುರಿಸುತ, ವಿಜಯವನು ಸಾಧಿಸುತ,

ಧ್ವಜವನ್ನು ಹಾರಿಸುತ, ಲಾಂಛನವ ತೋರುತ್ತ

ಪರಮಾತ್ಮ ತೆರಳಿದನು ಕಾನನದ ಕಡೆಗೆ

ಭಕ್ತರಾಭೀಷ್ಟವನು ಪೂರೈಸುವೆಡೆಗೆ
 
ಎಂಟನೆಯ ಸರ್ಗ / 131
 
24
 
25
 
26
 
27
 
॥ ೨೭ ॥