This page has been fully proofread once and needs a second look.

ಸಕಲ ಭುವನಕೆ ಒಡೆಯ, ನಮ್ಮ ಭಗವಂತ

ಆತನಿಗೆ ಅತಿ ಪ್ರಿಯನು, ಭುಜಗ ಪತಿಯು

ಧರೆಯೊಳವತರಿಸಿದ ಈತ ಲಕ್ಷ್ಮಣನ ಹೆಸರಿನಲಿ

ಕಾಮ, ಅನಿರುದ್ಧರು, ಭರತ, ಶತ್ರುಘ್ನರು

ಇವರ ಅಗ್ರಜನೀಗ ಶ್ರೀ ರಾಮಚಂದ್ರ

ಇವನ ಕಾಂತಿಗೆ ನಮ್ಮ ಚಂದ್ರಮನೂ ಸಮನಲ್ಲ
 
॥ ೨೦ ॥
 
ಸಜ್ಜನಕೆ ಉಪಟಳವ ನೀಡುತ್ತ ರಕ್ಕಸರು
ಶ್

ಸ್
ವೇಚ್ಛೆಯಲಿ ಕಾನನದಿ ವಿಹರಿಸುತಲಿದ್ದರು

ಪರಮಾತ್ಮ ತೆರಳಿದನು ಕಾನನಕೆ ಆಗ

ಧೂರ್ತ ದಾನವರನ್ನು ಸದೆಬಡಿಯಲೆಂದು
 

ಇಂತು ತೆರಳಿದ ಮಗನ ವಿರಹವನು ತಾಳದೆಯೆ

ಕಾತುರದಿ ನೋಡಿದನು ಪಿತನು ಸುತನೆಡೆಗೆ
 
॥ ೨೧ ॥
 
ಕಟುಕೇಶಿ ರಕ್ಕಸರ ನಾಯಕತ್ವವ ವಹಿಸಿ

ತಾಪಸರ ಯಜ್ಞಕ್ಕೆ ವಿಘ್ನ, ಹಾನಿಯ ಮಾಡಿ

ಮುನಿಜನಕೆ ಎದುರಾಗಿ ಕಲಹವನು ಸಾರಿ
 

ಹಲವು ಪರಿಯಲಿ ದುಷ್ಟ ಚೇಷ್ಟೆಗಳನೆಸಗಿದ್ದ

ಬಲಶಾಲಿ ದಾನವನ ಸಂಹರಿಸಿ ಪರಮಾತ್ಮ

ಗಳಿಸಿದನು ಸಜ್ಜನರ, ಸುರರ ಒಲುಮೆಯನು
 
॥ ೨೨ ॥
 
ಉತ್ತಮೋತ್ತಮರಾದ ಭೂಸುರರ ನಿವಹವು

ಬೆಳಗಿತ್ತು ಕಾನನದ ತೃಣ, ಕಾಷ್ಠ ಲತೆಗಳನು

ಮೊಳಗಿತ್ತು ಸುಸ್ವರದ, ಮಂತ್ರಘೋಷಗಳಲ್ಲಿ

ಮುನಿಜನರ ಯಜ್ಞಕ್ಕೆ ರಕ್ಷಣೆಯ ನೀಡುತ್ತ

ವಿಹರಿಸಿದ ವೇದಾದಿ ಸಚ್ಛಾಸ್ತ್ರ ಪ್ರತಿಪಾದ್ಯ

ಆಲಿಸುತ ರಮಣೀಯ ವಾಣಿ ಪುಂಖವನು
 
130 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥