This page has been fully proofread once and needs a second look.

ರುದ್ರಾದಿ ಸುರರಂಥ ಹರಿಯ ಸೇವಕರೆಲ್ಲ

ನಾಲ್ಮೊಗದ ಬ್ರಹ್ಮನನು ಸೇವಿಸುವ ಪರಿಯಲ್ಲಿ

ವ್ಯಾಸ ಮುನಿ ಆಶ್ರಮದ ಶಿಷ್ಯರೆಲ್ಲರೂ ಕೂಡಿ

ಗುಲ್ವಾಜ್ಞೆ ಇಂಗಿತವನರಿತವರ ತೆರದಲ್ಲಿ

ಆನಂದ ತೀರ್ಥರಿಗೆ ಅನುರೂಪ ಆಸನವ

ಭಕ್ತಿ ಆದರವನ್ನು ತೋರುತ್ತ ನೀಡಿದರು
 
॥ ೫೬ ॥
 
"ಕುಳಿತುಕೊಳ್ಳಿರಿ'' ಎಂದು ಎಲ್ಲರಿಗೂ ಸೂಚಿಸುತ

ಸತ್ಯವಾದಿಗಳಾದ ಆ ವ್ಯಾಸ ಮುನಿವರ್ಯರು

ಪೀಠಸ್ಥರಾದರು ಗಾಂಭೀರ್ಯದಿಂದ

ಆ ಬಳಿಕ ಆ ನಮ್ಮ ಆನಂದ ತೀರ್ಥರು

ಮುಗುಳು ನಗೆ ಸೂಸುತ್ತ, ದ್ವಿಜಗಣವ ನೋಡುತ್ತ
 

ಆಸಿನರಾದರು ಉಚಿತ ಆಸನದಿ
 
॥ ೫೭ ॥
 
"ಆನಂದ ತೀರ್ಥರು ಎಮಗಿಂತ ಉತ್ತಮರು"

ಇಂತೆಂದು ಅರಿತಿದ್ದ ಆಶ್ರಮದ ಯತಿಗಣವು

ವಿಧಿ ವಿಧಾನಗಳನ್ನು ಉಚಿತದಲ್ಲಿ ಅನುಸರಿಸಿ

ಆಚಾರ್ಯವರ್ಯರನು ಆದರದಿ ಉಪಚರಿಸಿ,
 

ಶ್ರವಣ-ಮೋಹಕವಾದ ವ್ಯಾಸ - ಮಧ್ವರ ವಾಣಿ

ಮುದದಿಂದ ಆಲಿಸುತ ಸಂತಸವ ಪೊಂದಿದರು
 
॥ ೫೮ ॥
 
ಸುಜ್ಞಾನ ನಿಧಿಗಳು ಶ್ರೀ ವೇದವ್ಯಾಸರು

ಸಾಕ್ಷಾತ್ತು ಶ್ರೀ ಹರಿಯ ದಿವ್ಯಾವತಾರವು

ಸಜ್ಜನಕೆ ತತ್ವವನು ಕರುಣಿಸಲು ಬಂದಿಹರು

ಆನಂದ ತೀರ್ಥರ ಹೆಸರನ್ನು ಹೊತ್ತು
 

ಧರೆಗಳಿದು ಬಂದಿಹರು ವಾಯುದೇವರು ಇಂದು

ಈ ಹರಿ-ವಾಯು ಮಿಲನವು ಆಶ್ರಮವ ಬೆಳಗಿತ್ತು
 
56
 
ಏಳನೆಯ ಸರ್ಗ / 121
 
57
 
58
 
59
 
॥ ೫೯ ॥
 
 
 
ಎಂಬಲ್ಲಿಗೆ ಶ್ರೀಮತ್ಕವಿಕುಲತಿಲಕ ಶ್ರೀ ತ್ರಿವಿಕ್ರಮ ಪಂಡಿತಾಚಾರ್ಯರ ಪುತ್ರ
ಶ್ರೀಮನ್ನಾರಾಯಣ ಪಂಡಿತಾಚಾರ್ಯ ವಿರಚಿತ ಶ್ರೀ ಸುಮಧ್ವವಿಜಯ ಮಹಾಕಾವ್ಯದ
ಆನಂದಾಂಕಿತ ಏಳನೆಯ ಸರ್ಗದ ಕನ್ನಡ ಪದ್ಯಾನುವಾದ ಸಮಾಪ್ತಿ
 
.