This page has been fully proofread once and needs a second look.

ಶ್ರೀ ವ್ಯಾಸ-ಮಧ್ವ ಸಮಾಗಮ
 

 
ಇಂತೆಂದು ಚಿಂತಿಸುತ ಆನಂದ ತೀರ್ಥರು

ಮೈಮನಗಳಲ್ಲೆಲ್ಲ ಶ್ರೀ ಹರಿಯ ಧ್ಯಾನಿಸುತ

ಬಾಹ್ಯಗತಿಯನು ಅವರು ತ್ವರಿತದಲ್ಲಿ ಕ್ರಮಿಸುತ್ತ

ವೇದಗಳ ಜನಕ ಶ್ರೀ ವ್ಯಾಸಮುನಿಗಳನು

ಹಿಂದೆ ಕಣ್ಣಲ್ಲಿ ಕಂಡು ಮುದಗೊಂಡಿದ್ದು

ಈಗವರ ನಿಜ ದೇಹ ಸಾಮೀಪ್ಯ ಪೊಂದಿದರು
 
॥ ೪೮ ॥
 
ಗುರುಭಕ್ತಿ ಭಾವವದು ತುಂಬ ಗುರುತಮವಹುದು

ಇಂಥ ಗುರುಭಕ್ತಿಯ ಅತಿಶಯದ ಭಾರದಲಿ

ದೇಹವನು ಬಾಗಿಸಿದ ಆನಂದ ತೀರ್ಥರು
 

ಭಕುತಿಯಿಂದಲಿ ತಮ್ಮ ಎರಡು ಕೈಜೋಡಿಸುತ

ಕಣ್ಣರೆಪ್ಪೆಗಳನ್ನು ಅರೆತೆರೆದು ನೋಡುತ್ತ

ಪೂಜ್ಯ ಗುರುವರ್ಯರಿಗೆ ಸ್ತೋತ್ರವನು ಸಲ್ಲಿಸಿದರು
 
॥ ೪೯ ॥
 
ಆನಂದ ತೀರ್ಥರಿಗೆ ವಿನಯವೇ ಆಭರಣವು

ಭವ್ಯ ಭೂಷಣವಹುದು ಆ ದಿವ್ಯ ಕಾಯಕ್ಕೆ

ಸಾಷ್ಟಾಂಗ ಕರ್ಮಗಳ ವಿಹಿತದಲಿ ಮಾಡುತ್ತ

ಪೂಜ್ಯರೆನಿಸಿದ ನಮ್ಮ ಆನಂದ ತೀರ್ಥರು

ವ್ಯಾಸಮುನಿಗಳ ಪಾದ ಪಂಕಜಗಳಲ್ಲಿ

ನಮಿಸಿದರು ಅತ್ಯಂತ ಭಕ್ತಿಪರವಶರಾಗಿ
 
॥ ೫೦ ॥
 
ಪರಾಶರಾತ್ಮಜರು, ವ್ಯಾಸ ಭಗವಾನರು

ಇಳೆಯೊಳಗೆ ಇಳಿದಿರುವ ಶ್ರೀ ಹರಿಯೇ ಅವರು

ತಮ್ಮ ಪಾದಕೆ ಎರಗಿ ಸಾಷ್ಟಾಂಗ ನಮಿಸಿದ

ಆನಂದ ತೀರ್ಥರನ್ನು ಪ್ರೇಮದಿಂದಲಿ ಕಂಡು

ತಮ್ಮೆರಡು ಕೈಗಳನ್ನು ಪ್ರೀತಿಯಲ್ಲಿ ಚಾಚಿ

ಹಿಡಿದೆತ್ತಿ ನಿಲಿಸಿದರು ಪರಮ ವಾತ್ಸಲ್ಯದಲ್ಲಿ
 
ಏಳನೆಯ ಸರ್ಗ / 119
 
48
 
49
 
50
 
51
 
ಲಿ ॥ ೫೧ ॥