This page has not been fully proofread.

ಆಶ್ರಮದ ದ್ವಿಜರಿಗೆ, ಪಂಡಿತೋತ್ತಮರಿಗೆ
ವೇದಗಳ ಗೌಪ್ಯವನ್ನು ಭೇದಿಸುವ ತವಕ
ನೀರ ಒರತೆಗೆ ಕಾಯ್ದ ಬಾವಿಗಳ ತರಹ
ಅವರ ಮನದಾಳದಲ್ಲಿ ಹತ್ತಾರು ಸಂದೇಹ
ನೂರಾರು ಪ್ರಶ್ನೆಗಳ ನೂರಾರು ಬಾವಿಗಳ
ಒಮ್ಮೆಲೇ ತುಂಬುವುದು ವ್ಯಾಸವಾಣಿಯ ಗಂಗೆ
 
"ಕಣ್ಮನಕೆ ಮುದವೀವ ವ್ಯಾಸಮುನಿಗಳ ನೋಟ !
ಅವರ ಆ ನೇತ್ರಗಳು ಕಮಲ ಪುಷ್ಪಗಳಂತೆ
ಜಗಕೆಲ್ಲ ನೀಡುವುವು ಸಂತಸದ ಸುಧೆಯನ್ನು
ಮಂದಹಾಸವು ಬೆರೆತ ಆ ದಿವ್ಯ ನೋಟವದು
ಲಾಲಿಪುದು ಬರಸೆಳೆದು ಬಿಗಿಯ ಬಂಧನದಿಂದ
ಪೂರ್ಣಗೊಳಿಸುದು ಎನ್ನ ಮನದ ಆಕಾಂಕ್ಷೆಯನು
 
" ಎನ್ನ ಈ ಸ್ಥಾನವನ್ನು ಅಪಹರಿಪ ಸಂಚಿನಲಿ
ಕಮಲವೇ ಮೊದಲಾದ ಇತರ ಪುಷ್ಪಗಳೆಲ್ಲ
ಮತ್ಸರವ ಸೂಸುತ್ತ ಸನ್ನಾಹ ನಡೆಸಿವೆ
ಇಂತು ಶ್ರೀ ಹರಿಯಲ್ಲಿ ಮೊರೆ ಇಡುತಲಿಹುದೋ
ಎಂಬಂತೆ ತೋರುತಿದೆ ಆ ತುಲಸಿ ದಲವು
ಕಿವಿಗಳಲ್ಲಿ ಕಂಗೊಳಿಪ ಆ ಕರ್ಣ ಭೂಷಣವು
 
"ಜಗಕೆಲ್ಲ ಒಡೆಯರು, ಶ್ರೀ ವೇದವ್ಯಾಸರು
ಅವರ ಆ ಭೂಲಾಸ್ಯ, ಎಂತಹ ಸ್ವಾರಸ್ಯ!
ಬ್ರಹ್ಮ ರುದ್ರರ ಸಹಿತ ಎಲ್ಲ ದೇವರ ಕ್ರಿಯೆಯು
ಸಕಲ ಜನ ಸಂಪದವು, ಉತ್ಪತ್ತಿ, ನಾಶವು
ಎಲ್ಲವೂ ಜರುಗುವುವು ಈ ಲಾಸ್ಯದಿಂದ
ಸಕಲ ಭುವನದ ಕಾರ್ಯಕಾರಣವು ಈ ಲಾಸ್ಯ
 
ಏಳನೆಯ ಸರ್ಗ / 117
 
40
 
41
 
42
 
43