This page has been fully proofread once and needs a second look.

ಭಕುತರಿಗೆ ಅಭಯವನು ನೀಡುವಾ ಹಸ್ತಗಳು !

ಈ ಹಸ್ತಗಳಲಿಹವು ದಿವ್ಯ ಮುದ್ರೆಗಳು

ಬಲಗೈಯ ತುದಿಯಲ್ಲಿ ಜ್ಞಾನಮುದ್ರೆಯು ಇಹುದು

ಭಜಿಸುವರ ಅಜ್ಞಾನ ಬಡಿದೋಡಿಸುವುದು

ಮೊಣಕಾಲ ಮೇಲಿರುವ ಎಡಗೈಯ ತುದಿಯು

ಭವದ ಭಯ ಪರಿಹರಿಸಿ ಮುಕ್ತಿಯನ್ನು ಕರುಣಿಪುದು
 
॥ ೩೭ ॥
 
"ಗುರುಕಂಠದಲ್ಲಿರುವ ಮೂರು ವರರೇಖೆಗಳು

ಉತ್ತಮೋತ್ತಮವಾದ ಜ್ಞಾನ ಸಂಕೇತಗಳು

ಸರ್ವಕಾಲದಲೆಲ್ಲ ತಾವು ನಲಿದುಚ್ಚರಿಪ

ಮೂರು ವೇದಗಳ ಮಂತ್ರರಾಶಿಯೆಲ್ಲವೂ ಕೂಡಿ

ಸ್ಪುಫುಟವಾದ ಅಂಕಿತವ ಪಡೆದಿವೆಯೋ ಎಂಬಂತೆ

ಕಂಗೊಳಿಸಿ<error> ಮರೆದಿಹವು</error><fix>ಮೆರೆದಿಹವು</fix> ಈ ಮೂರು ರೇಖೆಗಳು
 
" ॥ ೩೮ ॥
 
"ದೇವ ವೃಂದಕೆ ಇವರು ಶಿಖೆಯ ಮಣಿಯಂತಿಹರು

ಆ ದಿವ್ಯ ವದನ, ಪ್ರಖರ ಕಾಂತಿಯ ಸದನ !

ಅಪರಿಮಿತ ಶೋಭೆಯಲಿ ಪರಿಶೋಭಿಸುತ್ತಿಹುದು

ಹದಿನಾರು ಅಕಲಂಕ ಕಲೆಗಳನ್ನು ಹೊಂದಿರುವ

ಶತಕೋಟಿ ಚಂದ್ರರಿಗೂ ಮಿಗಿಲಾದ ಕಾಂತಿ

ಎಂತು ಬಣ್ಣಿಪುದಿಂಥ ಅಪ್ರತಿಮ ತೇಜವನು ?
 
" ॥ ೩೯ ॥
 
"ಚೆಲುವಾದ ಚೆಂದುಟಿಯು ನಯನ ಮೋಹಕ ಹುದು
 

ಅರುಣ ರಾಗದಿ ಮೆರೆವ ಆ ಅಧರ ಯುಗ್ಗಳು !

ಮಾಮರದ ಹೊಸ ಚಿಗುರ ಪರಿಯಲಿಹವು

ಪದ್ಮರಾಗದ ಮಣಿಯ ತುಣುಕುಗಳ ನಡುವೆ
 

ಹೊಳೆವ ಮುತ್ತುಗಳ ಮಾಲೆಯನ್ನು ಕೂಡ

ನಾಚಿಸುವ ತೆರವಿಹವು ದಂತಪಂಕ್ತಿಗಳು
 
116 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
36
 
37
 
38
 
39
 
" ॥ ೪೦ ॥