This page has been fully proofread once and needs a second look.

"ಅಗಣ್ಯಗುಣದಿಂದ ಪರಿಪೂರ್ಣ ಕಾಯ

ಅನಂತವಾಗಿಹುದು ಪ್ರತ್ಯೇಕವಾಗಿ

ಸಕಲ ಸದ್ಗುಣದಿಂದ ಸಂಪನ್ನವಾಗಿಹುದು

ಸಕಲ ದೋಷಗಳಿಂದ ದೂರವಾಗಿಹುದು
 

ಆನಂದ, ಪರಿಪೂರ್ಣ ಜ್ಞಾನಯುಕ್ತವಾಗಿಹ ದೇಹ

ಮಂಗಳಾತ್ಮಕರಿವರು, ಸುಸ್ವರೂಪರು ಇವರು
 
॥ ೨೪ ॥
 
"ಕಮಲಾಕಮಲಾಸನರು, ಅನಿಲ, ಗರುಡರು, ಶೇಷರು
 

ರುದ್ರೇಂದ್ರ ಮೊದಲಾದ ದೇವತೆಗಳೆಲ್ಲ

ಪದಪದ್ಮರಜವನ್ನು ಶಿರದಲ್ಲಿ ಧರಿಸುವರು

ಇಂಥ ಮಹಿಮರು ನಮ್ಮ ಶ್ರೀ ನಿಗಮ ವ್ಯಾಸರು

ಇವರ ಅಡಿದಾವರೆಯ ದಿವ್ಯ ಧೂಳಿಗಳನ್ನು

ಅನವರತ ಮುಡಿಯುವೆನು ಎನ್ನ ಶಿರದಲ್ಲಿ"
 
॥ ೨೫ ॥
 
"ಚರಣಗಳಿಗೆರಗುವೆನು ಪರಮ ಭಕುತಿಯಲಿ

ತನ್ನ ಭಕುತರ ಮನದ ರಾಗವನು ಮರ್ದಿಸಿದ

ಕಾರಣದಿ ಚರಣಗಳು ಅರುಣರಾಗವ ಹೊಂದಿ
 

ಪರಿಶೋಭಿಸುತ್ತಿವೆಯೋ
 
ಎಂಬ ಆಶಂಕೆ
 

ಧ್ವಜ, ವಜ್ರ, ಅಂಕುಶ, ಪದ್ಯಗಳ ಚಿಹ್ನೆಗಳು
 

ಕೂಡಿರುವ ಚರಣಗಳಿಗೆರಗುವೆನು ನಾನು
 
॥ ೨೬ ॥
 
"ಇಂಥ ಮಹಿಮರ ಉಗುರುಗಳನೆಂತು ಬಣ್ಣಿಸಲಿ ?

ಸಾಕ್ಷಾತ್ತು ಶ್ರೀ ಹರಿಯ ಚರಣಗಳವಕಾಶ್ರಯವು

ಪ್ರಜ್ವಲಿಪ ಕಾಂತಿಯಲ್ಲಿ ಬೆಳಗುವಾ ಉಗುರುಗಳು !

ಉಭಯ ರೀತಿಯ ಇರುಳ ಓಡಿಸುವ ಉಗುರುಗಳು !

ಒಳಗು, ಹೊರಗಿನ ಇರುಳ ಅಟ್ಟುವ ಉಗುರುಗಳು !

ಉದಯ ರವಿ ಕಾಂತಿಯನ್ನು ನಾಚಿಸುವ ಉಗುರುಗಳು !
 
ಏಳನೆಯ ಸರ್ಗ / 113
 
24
 
25
 
26
 
27
 

॥ ೨೭ ॥