This page has been fully proofread once and needs a second look.

ಶ್ರೀ ಮಹಾಭಾರತವು ಪಾರಿಜಾತದ ತೆರದಿ,

ಪುರಾಣೇತಿಹಾಸಗಳು ಚಂದ್ರಮನ ಪರಿಯಂತೆ

ಕ್ಷೀರಸಾಗರ ಮಥನ ಸಮಯದಲ್ಲಿ ಅಂದು

ಪಾರಿಜಾತದ ಬಳಿಕ ಚಂದ್ರಮನು ಬಂದಂತೆ

ಅಂತ್ಯದಲ್ಲಿ ಅಮೃತದ ಕಲಶವು ದೊರೆತಂತೆ

ವ್ಯಾಸಮುಖಮಂಡಲದಿ ಬ್ರಹ್ಮಸೂತ್ರಗಳುದಯ !
 
॥ ೨೦ ॥
 
"ಬ್ರಹ್ಮ ಸೂತ್ರದ ಭಾಷೆ ತುಂಬ ರಮಣೀಯ

ದಿವ್ಯ ಸೌಂದರ್ಯದ ವಚನ ಗಾಂಭೀರ್ಯ

ಇಂಥ ವಚನಗಳಿಂದ ಭೂಷಿತರು ವ್ಯಾಸರು

ಪಾಂಡುಪುತ್ರರ ಪರಿಯ ಸಜ್ಜನಕೆ ಕೃಪೆದೋರಿ

ತತ್ವಜ್ಞಾನವನೆಲ್ಲ ಪೋಷಿಸುವ ಸಲುವಾಗಿ

ಭೂಲೋಕದಲ್ಲೆಲ್ಲ ಬಹುಕಾಲ ಚರಿಸಿದರು
 
॥ ೨೧ ॥
 
"ಶ್ರೀ ವೇದವ್ಯಾಸರು ಷಡ್ಗುಣ ಪ್ರಪೂರ್ಣರು

ಸಕಲ ಐಸಿರಿಯಿಂದ ಸಂಪನ್ನರವರು

ರಜನಿ ಆಗಸದಲ್ಲಿ ಐತರಲು ಅನುವಾಗಿ
 

ಆ ರವಿಯು ಮರೆಯಾಗಿ ಹಿಂದೆ ಸರಿಯುವ ತೆರದಿ
 

ಪಾಮರರ ಕಂಗಳಿಗೆ ಗೋಚರಿಸದಂತೆ
 

ಬದರಿಕಾಶ್ರಮದಲ್ಲಿ ನೆಲೆಸಿದರು ಅವರು
 
॥ ೨೨ ॥
 
"ಪರಮ ಕೃಷ್ಣಾಜಿನದ ಯೋಗಪೀಠದ ಮೇಲೆ

ಆಸೀನರಾಗಿರ್ದು ಕಂಗೊಳಿಸಿ ಮೆರೆದಿರುವ

ವ್ಯಾಸಮುನಿಗಳ ಕಾಯ ವಿಜೃಂಭಿಸುತ್ತಿಹುದು

ಫುಲ್ಲ ಕುಸುಮಿತ ನೀಲ ಕಮಲಪುಷ್ಪದ ತೆರದಿ

ರಮಣೀಯ ಕಾಂತಿಯನು ಸೂಸುವಾ ಕಾಯ !

ಎನ್ನ ಮನ, ನಯನಗಳಿಗಾನಂದ ತುಂಬಿಹುದು.
 
112 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
20
 
21
 
22
 
23
 
॥ ೨೩ ॥