This page has been fully proofread once and needs a second look.

"ಆ ಕಮಂಡಲು, ಆ ಯೋಗದಂಡ!

ಸನ್ಯಾಸ ದೀಕ್ಷೆಯ ಜಾಜ್ವಲ್ಯ ಕುರುಹುಗಳು !

ಈ ತೇಜಸ್ವಿ ಯಾರೆಂದು ಅರಿಯಲಾರೆವು ನಾವು

ಅಪ್ರತಿಮ ಧೀಧೀಃಶಕ್ತಿ ಇವರದಾಗಿಹುದು

ಮನುಜರೂಪದಲಿರುವ ಈ ಯತಿಶ್ರೇಷ್ಠರು

ನಮಗೆಲ್ಲ ವಿಸ್ಮಯವನುಂಟು ಮಾಡುತಲಿಹರು "
 
॥ ೮ ॥
 
ಶೃತಿನಾಥನೆಂದೆನಿಸಿ ಖ್ಯಾತಿಯನ್ನು ಪಡೆದಿರುವ

ವ್ಯಾಸಮುನಿಗಳ ಕಾಂಬ ಹಂಬಲವ ತೋರುತ್ತ

ಬರುತಿರ್ಪ ಈ ದಿವ್ಯ ಯತಿವರ್ಯರನು ಕಂಡು

ಪವನ, ಚತುರಾನನರೇ ಬರುತಿರ್ಪರೋ ಎಂದು
 

ಸಂಶಯವ ತಳೆಯುತ್ತ ಆಶ್ರಮದ ವಾಸಿಗಳು

ಬೆರಗುಗೊಂಡರು ಆಗ ಅಪರಿಚಿತರನು ಕಂಡು
 
॥ ೯ ॥
 
ಬದರೀ ವೃಕ್ಷವರ್ಣನ

ಅಪರಿಚಿತರಾಗಮನ ವಿಸ್ಮಯವ ಮೂಡಿಸಿತು

ಬ್ರಾಹ್ಮಣ ಶ್ರೇಷ್ಠರಲಿ ಕೌತುಕವು ಮೂಡಿತ್ತು

ಅಪರಿಚಿತನ ಅಂಗಾಂಗ ಸೌಷ್ಠವವ ಕಂಡು

ಸೂಕ್ಷ್ಮ ವಿಶ್ಲೇಷಣೆಯ ಮಾಡತೊಡಗಿದರವರು

ಮಧ್ವಮುನಿಗಳು ಆಗ ತ್ವರಿತಗತಿಯಲ್ಲಿ ನಡೆದು

ದೇವ ಪಾದಪದಂಥ ತರುವೊಂದ ಕಂಡರು
 
॥ ೧೦ ॥
 
ನುಣುಪಾದ ತ್ವಚೆಯುಳ್ಳ ಉತ್ತುಂಗ ವೃಕ್ಷವದು

ರತ್ನದಂತಹ ಹೂವು ಎಲ್ಲೆಡೆಯೂ ಹರಡಿತ್ತು

ಶಾಖೋಪಶಾಖೆಗಳು ವೃಕ್ಷವನ್ನು ಆವರಿಸಿ

ಪನ್ನಗನ ಫಣಿಯಂತೆ ಕಂಗೊಳಿಸಿ ಮೆರೆದಿತ್ತು

ಪರಮಾತ್ಮ ಶ್ರೀ ಹರಿಯ ಸೇವೆಗೋ ಎಂಬಂತೆ

ಶೇಷ ದೇವರೇ ಅಲ್ಲಿ ನೆಲೆಸಿದಂತಿತ್ತು
 
ಏಳನೆಯ ಸರ್ಗ / 109
 
8
 
9
 
10
 
11
 
॥ ೧೧ ॥