This page has not been fully proofread.

ಬದರಿಗೆ ತೆರಳುವ ಸೂಚನ
 
"ಭಗವಂತನಿಹನಲ್ಲಿ, ವ್ಯಾಸರೂಪದಲಿ
ತೆರಳುವೆವು ನಾವಲ್ಲಿ ದರುಶನದ ಬಯಕೆಯಲಿ
ಮರಳಿ ಬರುವೆವೊ ಮತ್ತೆ ಹೇಳಲಾರೆವು ನಾವು
ಯಾರು ಬಲ್ಲರು ಇದನ ? ಅವನ ಹೊರತು ?
ಶ್ರೀ ಹರಿಯು ನಿಮಗೆಲ್ಲ ಮಂಗಳವ ನೀಡಲಿ"
ಎಂದೆನುತ ಬರೆದಿಟ್ಟು ಮುಗಿಸಿದರು ಮಧ್ವರು
 
ಶಿಷ್ಯರ ಆತಂಕ
 
"ಓ ಸ್ವಾಮಿ, ಮಧ್ವರೇ ! ಆಚಾರ್ಯ ಪುಂಗವರೇ !
ನೀವೆಮಗೆ ಪೂಜ್ಯರು । ನೀವೆಮಗೆ ಓಡೆಯರು
ಈ ಪರಿಯಲೆಮ್ಮನ್ನು ತೊರೆದು ತೆರಳದಿರಿ"
ಇಂತು ಆಚಾರ್ಯರನು ಪ್ರಾರ್ಥಿಸಲು ಬಯಸಿದರು
ಗುರುಗಳಭಿಮತಕಿದುವು ಯೋಗ್ಯವಲ್ಲಂದೆಣಿಸಿ
ಶಿಷ್ಯಗಣ ಕಡುಮೌನ ತಳೆದರಾಗ
 
ಸತ್ಯತೀರ್ಥರ ಗುರುಭಕ್ತಿ
 
ಶ್ರೀ ಸತ್ಯತೀರ್ಥರು ಮಧ್ವ ಶಿಷೋತ್ತಮರು
ಆಚಾರ್ಯ ಮುಖದಿಂದ ಐತರೇಯದ ಅರ್ಥ
ಶ್ರವಣ ಮಾಡಿದರವರು ಮೂರು ಬಾರಿ
ಆಚಾರ್ಯರಗಲಿಕೆಯ ದುಃಖವನ್ನು ತಾಳದೆ
ಗುರುಗಳಿಲ್ಲದ ಬಾಳ ಸಹಿಸಿಕೊಳ್ಳಲಾರದೆ
ಗುರುಮಧ್ವರಾ ಹಿಂದೆ ತಾವು ಸಹ ನಡೆದರು
 
ಆರನೆಯ ಸರ್ಗ / 101
 
48
 
49
 
50