This page has not been fully proofread.

ಕಾಷ್ಠಮೌನ ವ್ರತ
 
ಆಚಾರ್ಯ ಮಧ್ವರು ಪರಿಶುದ್ಧ ಚಿತ್ತರು
ಸಹಜವಾಗಿಯೇ ಅವರು ಶುದ್ಧಾಂತಃ ಕರಣರು
ಎಂದೆಂದೂ ಶ್ರೀ ಹರಿಯ ಕರುಣೆಯನ್ನು ಪಡೆದವರು
ದೈವಾನುಗ್ರಹವನ್ನು ಮತ್ತಷ್ಟು ಆರ್ಜಿಸಲು
 
"ಅನಂತ ಮಠ" ವೆಂಬ ಮಂದಿರದಿ ನೆಲೆಸಿದರು
 
ಶ್ರದ್ಧೆಯಲ್ಲಿ ನಡೆಸಿದರು ಮೌನೋಪವಾಸವನು
 
ವೇದವ್ಯಾಸರಿಂದ ಉತ್ತರ ಬದರಿಗೆ ಆಹ್ವಾನ
 
ಈ ಪರಿಯ ವ್ರತಗಳನ್ನು ಒಂದು ಮಂಡಲ ಪೂರ್ತಿ
ಶ್ರದ್ಧೆ ಭಕ್ತಿಯ ಸಹಿತ ಸಾವಧಾನದಿ ಮಾಡಿ
ಹರಿಚರಣ ಸೇವೆಯಲಿ ಮೈಮನವ ಮರೆತರು
ಪರಮ ಸಂತುಷ್ಟನು, ಶ್ರೀ ಹರಿಯು ಇದರಿಂದ
ಅನ್ಯರಿಗೆ ದೀಪ್ತಿಯ ದೃಷ್ಟಿ ಗೋಚರ ಮಾತ್ರ
ಮಧ್ವರಿಗೆ ಸನ್ನಿಧಿಗೆ ಬರಲು ಆಹ್ವಾನ!
 
ಇಂತು ಆಮಂತ್ರಿಸಿದ ವ್ಯಾಸರೂಪಿ ಹರಿಯು
ತೆರಳಿದನು ಆಶ್ರಮಕೆ ನಡುರಾತ್ರಿಯಲ್ಲಿ
ಪರಮಾತ್ಮನಾಣತಿಯ ಮನದಲ್ಲಿ ನೆನೆಯುತ್ತ
ಮೂರನೆಯ ದಿನದಲ್ಲಿ ಸೂರನುದಿಸಿದ ಬಳಿಕ
ಶಿಷ್ಯರೆಲ್ಲರಕರೆದು ಆನಂದ ತೀರ್ಥರು
 
ಲಿಖಿತ ಸಂದೇಶವನು ಬರೆದು ತೋರಿದರು
 
ಶ್ರೀ ಮಧ್ವ ಸಂದೇಶ
 
"ಬದರಿಕಾಶ್ರಮದಂಥ ಸ್ಥಳವು ಬೇರೊಂದಿಲ್ಲ
ವಿಷ್ಣು ಪದಿಯಂದದ ತೀರ್ಥ ಮತ್ತೊಂದಿಲ್ಲ
ಶ್ರೀ ಹರಿಗೆ ಸಮನಾದ ದೇವರೇ ಇಲ್ಲ
ನಾವು ಬೋಧಿಪ ಶಾಸ್ತ್ರವೇದ ಸಮ್ಮತ ಶಾಸ್ತ್ರ
ಇದಕಿಲ್ಲ ಸಮನಾದ ಮತ್ತೊಂದು ಶಾಸ್ತ್ರ"
ಎಂಬ ಮಧ್ವರ ನುಡಿಗೆ ಪೂತರಾದರು ಮಂದಿ
 
100 / ಶ್ರೀ ಸುಮಧ್ವ ವಿಜಯ ಕನ್ನಡ ಕಾವ್ಯ
 
44
 
45
 
46
 
47